ಕನ್ನಡ ಚಿತ್ರರಂಗದಲ್ಲಿ ಚಿತ್ರವೊಂದಕ್ಕೆ ಖಳನಾಯಕನ ಆಯ್ಕೆ ಈ ರೇಂಜಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಇದೇ ಮೊದಲು ಅನ್ಸತ್ತೆ. ಸ್ಯಾಂಡಲ್ವುಡ್ ಗೇಮ್ ಚೇಂಜರ್ ಕೆಜಿಎಫ್ ಕ್ರಿಯೇಟ್ ಮಾಡ್ತಿರೋ ಸೌಂಡ್ ಎಂಥದ್ದು ಅಂತ ಗೊತ್ತೇಯಿದೆ. ಆ ಸೌಂಡನ್ನು ಡಬಲ್ ಮಾಡೋಕ್ಕೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿಯಾಗಿದೆ.
ಯಶ್ ಮತ್ತು ಸಂಜು ಬಾಬಾ ಜುಗಲ್ಬಂದಿ ಇರೋ ಕೆಜಿಎಫ್ ಚಾಪ್ಟರ್-2 ಬಾಕ್ಸಾಫೀಸ್ನಲ್ಲಿ ಸುನಾಮಿ ಸೃಷ್ಟಿಸೋದು ಗ್ಯಾರೆಂಟಿ. ರಾಕಿ ಭಾಯ್- ಅಧೀರನ ಕಾದಾಟ ನೋಡೋಕ್ಕೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.
3 ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ಸೋಮವಾರ ಅಧೀರನನ್ನು ಪರಿಚಯಿಸ್ತೀವಿ ಅಂದಾಗ್ಲೇ, ಅಭಿಮಾನಿಗಳಿಗೇ ಅಧೀರ ಯಾರು ಅನ್ನೋ ಸುಳಿವು ಸಿಕ್ಕಿತ್ತು. ಕೆಜಿಎಫ್ ಫಸ್ಟ್ ಚಾಪ್ಟರ್ ರಿಲೀಸ್ ವೇಳೆಗೆ ಚಾಪ್ಟರ್ ಟೂನಲ್ಲಿ ಸಂಜಯ್ ದತ್ ನಟಿಸ್ತಾರೆ, ಈ ಬಗ್ಗೆ ಪ್ರಶಾಂತ್ ನೀಲ್ ಅಂಡ್ ಟೀಮ್, ಅಧೀರ ಪಾತ್ರಕ್ಕೆ ಸಂಜುಬಾಬಾನ ಅಪ್ರೋಚ್ ಮಾಡಿದ್ದಾರಂತೆ ಅನ್ನೋ ಸುದ್ದಿ ಕೇಳಿಬಂದಿತ್ತು. ಸಂಜಯ್ ದತ್ ನಟಿಸೋಕ್ಕೆ ನೋ ಅಂದರು, ಅಂತಾನು ಸುದ್ದಿಯಾಗಿತ್ತು. ಬಟ್ ಫೈನಲಿ ಸಂಜುಬಾಬಾನ ಕನ್ನಡಕ್ಕೆ ಕರ್ಕೊಂಡ್ ಬರುವಲ್ಲಿ ಕೆಜಿಎಫ್ ಟೀಂ ಸಕ್ಸಸ್ ಕಂಡಿದೆ.
ಕೆಜಿಎಫ್ ಪ್ರೀಕ್ವೆಲ್ನಲ್ಲಿ ಅಧೀರ ಸಾವನ್ನಪ್ಪಿದಂತೆ ತೋರಿಸಿದರು, ಕ್ಲೈಮ್ಯಾಕ್ಸ್ನಲ್ಲಿ ಮತ್ತೆ ಅಧೀರ ದರ್ಶನ ಕೊಡ್ತಾನೆ. ಇಡೀ ಸಿನಿಮಾ ಅಧೀರನನ್ನು ತೋರಿಸೋದೇ ಇಲ್ಲ. ಆದರೆ ಕ್ಲೈಮ್ಯಾಕ್ಸ್ನಲ್ಲಿ ಗರುಡ ಸತ್ತ ಮೇಲೆ ಅಧೀರನ್ನು ತೋರಿಸಿ, ಟ್ವಿಸ್ಟ್ ಕೊಟ್ಟಿದರು ನಿರ್ದೇಶಕರು. ಫಸ್ಟ್ ಪಾರ್ಟ್ನಲ್ಲಿ ದರ್ಶನ ಕೊಡದ ಅಧೀರನೇ ಸೆಕೆಂಡ್ ಪಾರ್ಟ್ನ ಅಸಲಿ ವಿಲನ್. ಹಾಗಾಗಿ ಆ ಪಾತ್ರಕ್ಕೆ ಖಡಕ್ ಕಲಾವಿದನ ಹುಡುಕಾಟದಲ್ಲಿತ್ತು ಕೆಜಿಎಫ್ ಟೀಂ, ನಿರ್ದೇಶಕ ಪ್ರಶಾಂತ್ ನೀಲ್ ಅಂತೂ ಸಂಜುಬಾಬಾಗಂತ್ಲೇ ಆ ಪಾತ್ರವನ್ನು ಡಿಸೈನ್ ಮಾಡಿದ್ದಾರೆ ಅನ್ನಿಸುತ್ತೆ. ಕೊನೆಗೆ ಅವರೇ ಬಂದಿದ್ದಾರೆ.
ಹೀರೋಗಿಂತ ವಿಲನ್ ಸ್ಟ್ರಾಂಗ್ ಆಗಿ ಇದ್ದರೆ, ಅವರಿಬ್ಬರ ಕಾದಾಟ ಪ್ರೇಕ್ಷಕನಿಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತೆ. ಪವರ್ ಬೇಕು ಅಂತ ಮುಂಬೈ ಸೇರಿದ ಚಾಲಾಕಿ ಹುಡುಗ ಮುಂದೆ ಮುಂಬೈ ಡಾನ್ ರಾಕಿ ಆಗಿದ್ದು, ಅಲ್ಲಿಂದ ಕೆಜಿಎಫ್ಗೆ ಬಂದು ಗರುಡನನ್ನು ಕೊಂದು ರಾಕಿ ಭಾಯ್ ಆಗೋದನ್ನು ನೋಡಿದ್ದೇವೆ. ಇಂತಹ ಪ್ರಳಯಾಂತಕನ ಎದುರು ಅಬ್ಬರಿಸೋಕ್ಕೆ ಚಾಪ್ಟರ್ ಟೂನಲ್ಲಿ ಮತ್ತೊಬ್ಬ ಪ್ರಳಯಾಂತಕ ಬರ್ತಾನೆ. ಅವನೇ ಅಧೀರ. ಈಗ ಗೊತ್ತಾಯ್ತಲ್ಲ, ಅಧೀರನ ಪಾತ್ರ ಎಷ್ಟು ಪವರ್ಫುಲ್ ಅಂತ. ಇಂತ ಪವರ್ಪುಲ್ ರೋಲ್ನಲ್ಲಿ ಸಂಜುಬಾಬ ಅಬ್ಬರಿಸಿದರೆ ಹೇಗಿರುತ್ತೆ ಹೇಳಿ.
ಕೆಜಿಎಫ್ ಫಸ್ಟ್ ಚಾಪ್ಟರ್ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಚಾಪ್ಟರ್ ಟೂ ಬಗ್ಗೆ ಸಿಕ್ಕಾಪಟ್ಟೆ ಎಕ್ಸ್ಪೆಕ್ಟೇಷನ್ ಇದೆ. ಅದಕ್ಕೆ ತಕ್ಕಂತೆ ಈಗಾಗಲೇ ಭರ್ಜರಿಯಾಗಿ ಶೂಟಿಂಗ್ ನಡೆಸ್ತಿದೆ ಚಿತ್ರತಂಡ. ಸಂಜಯ್ ದತ್ ಆಗಮನದಿಂದ ಕೆಜಿಎಫ್ ಖದರ್ ಡಬಲ್ಲಾಗಿದೆ. ಚಿತ್ರತಂಡವೇ ಹೇಳಿದಂತೆ ಚಾಪ್ಟರ್ ವನ್ಗಿಂತ ಚಾಪ್ಟರ್ ಟೂ ಹಲವು ಪಟ್ಟು ದೊಡ್ಡದಾಗಿರುತ್ತೆ. ಅದೇ ರೇಂಜ್ಗೆ ಎಲ್ಲರ ಕ್ಯಾರೆಕ್ಟರೈಷೇನ್, ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲಾನ್ ಮಾಡಲಾಗ್ತಿದೆ. ನಿರ್ದೇಶಕರು ಅಧೀರನ ಪಾತ್ರವನ್ನು ಅದ್ಭುತವಾಗಿ ಡಿಸೈನ್ ಮಾಡಿದ್ದು, ಸಂಜುಬಾಬಾ ಧೂಳೆಬ್ಬಿಸೋದು ಪಕ್ಕಾ
ಚಿತ್ರತಂಡ ಜುಲೈ 29ಕ್ಕೆ ಅಧೀರ ಯಾರು ಅನ್ನೋದನ್ನು ಹೇಳ್ತಿವಿ ಅಂದಾಗ್ಲೇ ಅಭಿಮಾನಿಗಳಿಗೆ ಅದು ಸಂಜಯ್ ದತ್ ಅನ್ನೋದು ಗೊತ್ತಾಗಿತ್ತು. ಹುಟ್ಟುಹಬ್ಬದ ದಿನ ಪೋಸ್ಟರ್ ಸಮೇತ ಅಧೀರ ಪಾತ್ರಧಾರಿಯನ್ನು ಘೋಷಿಸಲಾಗಿದೆ. ಕೆಜಿಎಫ್ ಚಿತ್ರದ ಎಲ್ಲಾ ಪಾತ್ರಗಳಿಗೆ ವಿಭಿನ್ನ ಲುಕ್ ಮತ್ತು ಮ್ಯಾನರಿಸಂ ಡಿಸೈನ್ ಮಾಡಿರೋ ಪ್ರಶಾಂತ್ ನೀಲ್, ಅಧೀರನನ್ನು ಅಷ್ಟೆ ಸ್ಪೆಷಲ್ಲಾಗಿ ತೋರಿಸ್ತಿದ್ದಾರೆ. ಈಗಾಗಲೇ ಪೋಸ್ಟರ್ನಲ್ಲಿ ಅದರ ಝಲಕ್ ನೋಡ್ಬೋದು. ಅರ್ಧ ಮುಖ ಮುಚ್ಚಿಕೊಂಡಿರುವಂತೆ ಸಂಜಯ್ ದತ್, ಅಧೀರ ಖಡಕ್ ಲುಕ್ ಅಭಿಮಾನಿಗಳ ಮನಗೆದ್ದಿದೆ.
ರಾಕಿ ಭಾಯ್ ಮತ್ತು ಅಧೀರನ ನಡುವಿನ ಸಂಘರ್ಷ, ಎಲ್ಲಾ ಸಂಘರ್ಷಗಳನ್ನು ಮೀರಿದ ಸಂಘರ್ಷ, ಅಂತ ಸ್ವತ: ಚಿತ್ರತಂಡವೇ ಹೇಳಿದ್ದು, ಈ ಸಂಘರ್ಷ ತೆರೆಮೇಲೆ ಜಾದೂ ಮಾಡಲಿದೆ. ಅಪ್ಪಟ ಕನ್ನಡಿಗರ ಸಿನಿಮಾ ಆದರು, ಕೆಜಿಎಫ್ ಬಾಲಿವುಡ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು, ಅಂತಾದ್ರಲ್ಲಿ, ಸಂಜಯ್ ದತ್ ವಿಲನ್ ಅಂದ್ಮೇಲೆ ಚಾಪ್ಟರ್ ಟೂ ಯಾವ ರೇಂಜ್ಗೆ ಸೌಂಡ್ ಮಾಡ್ಬೋದು ಊಹಿಸಿ. ಅದೇ ಕಾರಣಕ್ಕೆ ಸಂಜಯ್ ದತ್ ಎಂಟ್ರಿ, ಕೆಜಿಎಫ್ ಟೀಂಗೆ ಆನೆಬಲ ತಂದು ಕೊಟ್ಟಿದೆ. ಚಾಪ್ಟರ್ ಟೂ ಚಿತ್ರತಂಡದ ಊಹೆಯನ್ನೂ ಮೀರುವ ಸುಳಿವು ಸಿಕ್ತಿದೆ.
ಸಂಜಯ್ ದತ್ ಅಧೀರ ಪಾತ್ರ ಮಾಡ್ತಾರೆ ಅನ್ನೋದನ್ನಷ್ಟೆ ಹೇಳಿರೋ ಚಿತ್ರತಂಡ, ಯಾವಾಗ ಶೂಟಿಂಗ್ನಲ್ಲಿ ಭಾಗವಹಿಸ್ತಾರೆ, ಅನ್ನೋದು ಸೇರಿದಂತೆ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಒಟ್ಟಾರೆ ಕೆಜಿಎಫ್ ಚಾಪ್ಟರ್-2 ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋದು ಪಕ್ಕಾ ಅನ್ನೋದು ಮೇಕಿಂಗ್ ಹಂತದಲ್ಲೇ ಗೊತ್ತಾಗ್ತಿದೆ.
Comments are closed.