ಮಾಜಿ ಕ್ರಿಕೆಟರ್ ಶ್ರೀಶಾಂತ್, ಕ್ರಿಕೆಟ್ ಫೀಲ್ಡ್ ಬಿಟ್ಟು, ಕಂಪ್ಲೀಟಾಗಿ ಸಿನಿಮಾ ಫೀಲ್ಡ್ ಕಡೆ ವಾಲಿದ್ದಾರೆ. ಶೀಘ್ರದಲ್ಲೇ ಕೆಂಪೇಗೌಡ-2 ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿರೋ ಶ್ರೀ, ಅದರ ಮಧ್ಯೆ ಧೂಮ್ ಅಗೇನ್ ಅಂತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಶ್ರೀಶಾಂತ್ ದೊಡ್ಮನೆ ಸ್ಟಾರ್ಸ್ ಮತ್ತು ಚಾಲೆಂಜಿಂಗ್ ಸ್ಟಾರ್ ಬಗ್ಗೆ ಕನ್ನಡದಲ್ಲೇ ಅಭಿಮಾನದ ಮಾತುಗಳನ್ನಾಡಿದ್ದಾರೆ.
ಧೂಮ್ ಅಗೇನ್. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರ್ತಿರೋ ಸಿನಿಮಾ. ರಾಜೇಶ್ ವರ್ಮಾ ನಿರ್ದೇಶನ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಾಲ್ವರು ಹೊಸ ಹುಡುಗರು ಬಣ್ಣ ಹಚ್ಚಿದ್ದಾರೆ. ವಾಸು, ಪ್ರವೀಣ್ ಶೆಟ್ಟಿ, ರಾಕೇಶ್, ಅರ್ಜುನ್ ಶೆಟ್ಟಿ ಹೀರೋಗಳಾಗಿ ಈ ಸಿನಿಮಾ ಮೂಲಕ ಪರಿಚಿತರಾಗ್ತಿದ್ದಾರೆ. ಶ್ರೀಶಾಂತ್ ಜೋಡಿಯಾಗಿ ಅಂತಾರಾಷ್ಟ್ರೀಯ ಮಾಡೆಲ್ ಜನಿರಾ ಹೈದರ್ ಮಿಂಚಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಧೂಮ್ ಅಗೇನ್ ಸಿನಿಮಾ ಟೀಸರ್ ಲಾಂಚ್ ಮಾಡಿದ್ದು ವಿಶೇಷ. ಚಿತ್ರದಲ್ಲಿ ಸೂಪರ್ ಬೈಕ್ ಏರಿ ಆರ್ಭಟಿಸುವ ಹುಡುಗರ ಹಿಂದೆ ಬೀಳುವ ಸ್ಪೆಷಲ್ ಏಜೆಂಟ್ ಆಗಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ. ರವಿವರ್ಮಾ ಸ್ಟಂಟ್ಸ್, ಎ. ಹರ್ಷ ಕೊರಿಯೋಗ್ರಫಿ, ಗುರುಕಿರಣ್ ಮ್ಯೂಸಿಕ್ ಧೂಮ್ ಅಗೇನ್ ಚಿತ್ರಕ್ಕಿದೆ.
ಧೂಮ್ ಅಗೇನ್ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಕ್ರಿಕೆಟರ್ ಶ್ರೀಶಾಂತ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಬಗ್ಗೆ ಮಾತನಾಡಿದರು. ನಾನು ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ಅಂದ ಶ್ರೀ, ಅವರ ಸಹೋದರ ಶಿವರಾಜ್ಕುಮಾರ್ ಗ್ರೇಟ್ ನಟ ಅಂದರು. ಕನ್ನಡ ಅರ್ಥ ಮಾಡಿಕೊಂಡು ಕನ್ನಡದಲ್ಲೇ ಹೆಚ್ಚು ಮಾತನಾಡಿದರು.
ಕುರುಕ್ಷೇತ್ರ ಸಿನಿಮಾ ಜೊತೆಗೆ ನೀವು ನಟಿಸಿರೋ ಕೆಂಪೇಗೌಡ ಸಿನಿಮಾ ಕೂಡ ಬರ್ತಿದೆ ಅಂದಾಗ. ದರ್ಶನ್ ಸೂಪರ್ ಸ್ಟಾರ್, ಕೋಮಲ್ ಕೂಡ ದೊಡ್ಡ ಸ್ಟಾರ್ ಎಲ್ಲರೂ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಹರಸಿ ಅಂದರು. ಶ್ರೀಶಾಂತ್ ಕನ್ನಡ ಚಿತ್ರದಲ್ಲಿ ನಟಿಸೋದರ ಜೊತೆಗೆ ಕನ್ನಡ ಕಲಿತು, ಕನ್ನಡ ಕಲಾವಿದರ ಬಗ್ಗೆ ಅಭಿಮಾನನದ ಮಾತುಗಳನ್ನಾಡ್ತಿರೋದು ವಿಶೇಷವಾಗಿದೆ.
Comments are closed.