ಕ್ರೀಡೆ

ಸ್ಯಾಂಡಲ್​ವುಡ್​​ ನಟ ದರ್ಶನ್ ಗುಣಗಾನ ಮಾಡಿದ ಹೆಸರಾಂತ ಕ್ರಿಕೆಟಿಗ

Pinterest LinkedIn Tumblr


ಮಾಜಿ ಕ್ರಿಕೆಟರ್ ಶ್ರೀಶಾಂತ್​, ಕ್ರಿಕೆಟ್​​ ಫೀಲ್ಡ್​​​​ ಬಿಟ್ಟು, ಕಂಪ್ಲೀಟಾಗಿ ಸಿನಿಮಾ ಫೀಲ್ಡ್​​​ ಕಡೆ ವಾಲಿದ್ದಾರೆ. ಶೀಘ್ರದಲ್ಲೇ ಕೆಂಪೇಗೌಡ-2 ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಿರೋ ಶ್ರೀ, ಅದರ ಮಧ್ಯೆ ಧೂಮ್​ ಅಗೇನ್​ ಅಂತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಶ್ರೀಶಾಂತ್​​ ದೊಡ್ಮನೆ ಸ್ಟಾರ್ಸ್​​​ ಮತ್ತು ಚಾಲೆಂಜಿಂಗ್ ಸ್ಟಾರ್ ಬಗ್ಗೆ ಕನ್ನಡದಲ್ಲೇ ಅಭಿಮಾನದ ಮಾತುಗಳನ್ನಾಡಿದ್ದಾರೆ.

ಧೂಮ್ ಅಗೇನ್​. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರ್ತಿರೋ ಸಿನಿಮಾ. ರಾಜೇಶ್ ವರ್ಮಾ ನಿರ್ದೇಶನ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಾಲ್ವರು ಹೊಸ ಹುಡುಗರು ಬಣ್ಣ ಹಚ್ಚಿದ್ದಾರೆ. ವಾಸು, ಪ್ರವೀಣ್ ಶೆಟ್ಟಿ, ರಾಕೇಶ್, ಅರ್ಜುನ್ ಶೆಟ್ಟಿ ಹೀರೋಗಳಾಗಿ ಈ ಸಿನಿಮಾ ಮೂಲಕ ಪರಿಚಿತರಾಗ್ತಿದ್ದಾರೆ. ಶ್ರೀಶಾಂತ್​​ ಜೋಡಿಯಾಗಿ ಅಂತಾರಾಷ್ಟ್ರೀಯ ಮಾಡೆಲ್ ಜನಿರಾ ಹೈದರ್ ಮಿಂಚಿದ್ದಾರೆ.

ಪವರ್​​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಧೂಮ್ ಅಗೇನ್​ ಸಿನಿಮಾ ಟೀಸರ್ ಲಾಂಚ್​ ಮಾಡಿದ್ದು ವಿಶೇಷ. ಚಿತ್ರದಲ್ಲಿ ಸೂಪರ್​ ಬೈಕ್​ ಏರಿ ಆರ್ಭಟಿಸುವ ಹುಡುಗರ ಹಿಂದೆ ಬೀಳುವ ಸ್ಪೆಷಲ್ ಏಜೆಂಟ್ ಆಗಿ ಮಾಜಿ ಕ್ರಿಕೆಟಿಗ ಶ್ರೀಶಾಂತ್​ ಕಾಣಿಸಿಕೊಂಡಿದ್ದಾರೆ. ರವಿವರ್ಮಾ ಸ್ಟಂಟ್ಸ್, ಎ. ಹರ್ಷ ಕೊರಿಯೋಗ್ರಫಿ, ಗುರುಕಿರಣ್​ ಮ್ಯೂಸಿಕ್​ ಧೂಮ್​ ಅಗೇನ್​ ಚಿತ್ರಕ್ಕಿದೆ.

ಧೂಮ್ ಅಗೇನ್​ ಸಿನಿಮಾ ಟೀಸರ್​ ಲಾಂಚ್​ ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಕ್ರಿಕೆಟರ್ ಶ್ರೀಶಾಂತ್, ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಮತ್ತು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಬಗ್ಗೆ ಮಾತನಾಡಿದರು. ನಾನು ಪುನೀತ್​ ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ ಅಂದ ಶ್ರೀ, ಅವರ ಸಹೋದರ ಶಿವರಾಜ್​ಕುಮಾರ್​​​​ ಗ್ರೇಟ್​​ ನಟ ಅಂದರು. ಕನ್ನಡ ಅರ್ಥ ಮಾಡಿಕೊಂಡು ಕನ್ನಡದಲ್ಲೇ ಹೆಚ್ಚು ಮಾತನಾಡಿದರು.

ಕುರುಕ್ಷೇತ್ರ ಸಿನಿಮಾ ಜೊತೆಗೆ ನೀವು ನಟಿಸಿರೋ ಕೆಂಪೇಗೌಡ ಸಿನಿಮಾ ಕೂಡ ಬರ್ತಿದೆ ಅಂದಾಗ. ದರ್ಶನ್​ ಸೂಪರ್ ಸ್ಟಾರ್, ಕೋಮಲ್​ ಕೂಡ ದೊಡ್ಡ ಸ್ಟಾರ್ ಎಲ್ಲರೂ ಥಿಯೇಟರ್​ಗೆ ಬಂದು ಸಿನಿಮಾ ನೋಡಿ ಹರಸಿ ಅಂದರು. ಶ್ರೀಶಾಂತ್​ ಕನ್ನಡ ಚಿತ್ರದಲ್ಲಿ ನಟಿಸೋದರ ಜೊತೆಗೆ ಕನ್ನಡ ಕಲಿತು, ಕನ್ನಡ ಕಲಾವಿದರ ಬಗ್ಗೆ ಅಭಿಮಾನನದ ಮಾತುಗಳನ್ನಾಡ್ತಿರೋದು ವಿಶೇಷವಾಗಿದೆ.

Comments are closed.