ರಾಯ್ಪುರ್: ಹಿಂದಿಯ ಪ್ರಖ್ಯಾತ ಧಾರಾವಾಹಿ ಸಂಕಟ ಮೋಚನ್ ಹನುಮಾನ್ ಖ್ಯಾತಿಯ ಬಾಲನಟ ಶಿವ್ಲೇಕ್ ಸಿಂಗ್(14) ಛತ್ತೀಸ್ಘಡದ ರಾಯ್ಪುರ್ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈತನ ಅಪ್ಪ- ಅಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರದಂದು ಮಧ್ಯಾಹ್ನ 3ಗಂಟೆ ಸಮಯದಲ್ಲಿ ಬಾಲನಟ ಶಿವ್ಲೇಕ್ ಸಿಂಗ್ ಅಪ್ಪ- ಅಮ್ಮನ ಜೊತೆ ರಾಯ್ಪುರ್ಗೆ ಇಂಟರ್ವ್ಯೂ ಸಲುವಾಗಿ ತೆರಳುತ್ತಿರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಶಿವ್ಲೇಕ್ ಚಲಿಸುತ್ತಿದ್ದ ಕಾರ್, ಟ್ರಕ್ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಇನ್ನು ಶಿವ್ಲೇಕ್ ಮೂಲತಃ ಛತ್ತೀಸ್ಘಡದ ಜಂಜ್ಗೀರ್- ಚಂಪಾ ಜಿಲ್ಲೆಯವನಾದರೂ, ತಂದೆ-ತಾಯಿಯೊಟ್ಟಿಗೆ ಮುಂಬೈನಲ್ಲಿ ವಾಸಿಸುತ್ತಿದ್ದ. ಹಿಂದಿಯ ಪ್ರಖ್ಯಾತ ಧಾರಾವಾಹಿಗಳಾದ ಸಂಕಟ್ ಮೋಚನ್ ಹನುಮಾನ, ಸಸುರಾಲ್ ಸಿಮರ್ಕಾ ಧಾರಾವಾಹಿಯಲ್ಲಿ ಈ ಬಾಲನಟ ಬಣ್ಣ ಹಚ್ಚಿದ್ದಾನೆ.
ಈ ಬಗ್ಗೆ ಸ್ಥಳೀಯ ಪೊಲೀಸರು ಟ್ರಕ್ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
Comments are closed.