ಮನೋರಂಜನೆ

ದರ್ಬಾರ್ ಸಿನಿಮಾ ಸೆಟ್​​ನಲ್ಲಿ ನಯನ್​​ ಕಾಟಕ್ಕೆ ಬೇಸತ್ತ ರಜಿನಿಕಾಂತ್

Pinterest LinkedIn Tumblr


ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ನಯನತಾರ ದರ್ಬಾರ್ ಸಿನಿಮಾದಲ್ಲಿ ನಟಿಸ್ತಿರೋದು ಗೊತ್ತೇಯಿದೆ. ಎ. ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ತಲೈವಾ ಖಾಕಿ ಖದರ್ ತೋರ್ಸೋಕ್ಕೆ ಬರ್ತಿದ್ದಾರೆ.

ಸದ್ಯ ಶೂಟಿಂಗ್​​ ಶರವೇಗದಲ್ಲಿ ಸಾಗ್ತಿದೆ. ಆದರೆ ಸೆಟ್​​ನಲ್ಲಿ ನಯನ್​​ ಕಾಟಕ್ಕೆ ರಜಿನಿಕಾಂತ್ ಬೇಸತ್ತಿದ್ದಾರಂತೆ. ನೋಡೋ ಅಷ್ಟು ನೋಡಿ ಕೊನೆಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರಂತೆ. ಅಷ್ಟಕ್ಕೂ ಏನಾಯ್ತು ಅಂತೀರಾ..? ನಯನತಾರ ಮತ್ತು ನಿರ್ದೇಶನ ವಿಘ್ನೇಶ್ ಸಿವನ್ ಲವ್ ಸ್ಟೋರಿ ಎಲ್ಲರಿಗೂ ಗೊತ್ತೇಯಿದೆ. ವಿಘ್ನೇಶ್ ಪ್ರತಿಭಾವಂತ ನಿರ್ದೇಶಕ ಅನ್ನೋದು ಈಗಾಗಲೇ ಸಾಬೀತಾಗಿದೆ. ತನ್ನ ಪ್ರಿಯಕರನ ಬಗ್ಗೆ ನಯನತಾರ, ರಜಿನಿಕಾಂತ್ ಬಳಿ ಹೇಳಿಕೊಂಡಿದ್ದಾರಂತೆ. ವಿಘ್ನೇಶ್ ತುಂಬಾ ಒಳ್ಳೆ ಡೈರೆಕ್ಟರ್, ಅವರು ನಿಮಗೊಂದು ಕಥೆ ರೆಡಿ ಮಾಡಿದ್ದಾರೆ.

ನೀವು ನಟಿಸ್ಬೇಕು ಅಂತ ರಜಿನಿಕಾಂತ್ ಬೆನ್ನು ಬಿದ್ದಿದ್ದಾರಂತೆ. ಆರಂಭದಲ್ಲಿ ನೋಡೋಣ ಮಾಡೋಣ ಅಂತ ತಲೈವಾ ಸುಮ್ಮನಾಗಿದ್ರಂತೆ. ದರ್ಬಾರ್ ಸೆಟ್​ನಲ್ಲಿ ಪದೇ ಪದೇ ಇದೇ ವಿಚಾರವಾಗಿ ನಯನ್, ಮಾತನಾಡುತ್ತಿರೋದು ರಜಿನಿ​​ಗೆ ಇರಿಸುಮುರಿಸು ಉಂಟು ಮಾಡಿದೆಯಂತೆ. ಅದೇ ಕಾರಣಕ್ಕೆ ಇನ್ಮುಂದೆ ಆ ವಿಚಾರ ಮಾತನಾಡದಂತೆ ನಯನತಾರಗೆ ತಾಕೀತು ಮಾಡಿದ್ದಾರಂತೆ.

ಒಂದ್ಕಡೆ ಸೂಪರ್ ಸ್ಟಾರ್ ರಜಿನಿಕಾಂತ್ ಹೊಸ ಪಕ್ಷ ಕಟ್ಟಿ ಚುನಾವಣೆ ಧುಮುಕೋ ಘೋಷಣೆ ಮಾಡಿದ್ದಾರೆ. ದರ್ಬಾರ್ ನಂತ್ರ ಮತ್ಯಾವುದೇ ಸಿನಿಮಾದಲ್ಲಿ ತಲೈವಾ ನಟಿಸೋಲ್ಲ ಅನ್ನಲಾಗ್ತಿದೆ. ಹಾಗಾಗಿ ನಯನತಾರ ಆಸೆ ಈಡೇರುತ್ತಾ..? ವಿಘ್ನೇಶ್ ಸಿವನ್ ನಿರ್ದೇಶನದ ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಸ್ತಾರಾ..? ಕಾದು ನೋಡ್ಬೇಕು.

Comments are closed.