ಕ್ರೀಡೆ

ಮೈದಾನದಲ್ಲಿ ಈ ಕೆಲಸ ಮಾಡಿ ಟ್ರೋಲ್​ ಆದ ಪಾಕ್​ ನಾಯಕ ಸರ್ಫ್​ರಾಜ್​

Pinterest LinkedIn Tumblr


ಮ್ಯಾಂಚೆಸ್ಟರ್​: ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್​ ವಿಶ್ವಕಪ್​ ಪಂದ್ಯಾವಳಿ ನಡೆಯುತ್ತಿದ್ದು ಈಗಾಗಲೇ ಭಾರತದ ಬ್ಯಾಟಿಂಗ್​ ಮುಗಿದು ಪಾಕ್​ಗೆ 337 ರನ್​ಗಳ ಗುರಿ ನೀಡಿದೆ. ಮಳೆ ಕೂಡ ಆಗಾಗ ಕಾಡುತ್ತಿದೆ. ಹೀಗೆಲ್ಲ ಇರುವಾಗ ಪಾಕ್​ ನಾಯಕ ಮೈದಾನದಲ್ಲಿ ಮಾಡಿದ ಕೆಲಸವೊಂದು ವಿಪರೀತ ಟ್ರೋಲ್​ ಆಗುತ್ತಿದೆ.

ಟಾಸ್​ ಗೆದ್ದ ಪಾಕಿಸ್ತಾನ ಭಾರತಕ್ಕೆ ಮೊದಲು ಬ್ಯಾಟ್​ ಮಾಡುವ ಅವಕಾಶ ಕೊಟ್ಟಿತ್ತು. ಭಾರತದ ಬ್ಯಾಟಿಂಗ್​ ವೇಳೆ ಫೀಲ್ಡಿಂಗ್​ ಮಾಡುತ್ತಿದ್ದ ಪಾಕ್​ ನಾಯಕ ಸರ್ಫರಾಜ್​ ಅಹಮ್ಮದ್​ ಆಕಳಿಕೆ ತೆಗೆಯುತ್ತ ನಿಂತಿರುವ ಪೋಟೋವೊಂದು ವಿಪರೀತ ವೈರಲ್​ ಆಗಿದ್ದು, ಅವರ ಅಭಿಮಾನಿಗಳೂ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಹಲವರು ಟೀಕೆ ಮಾಡುತ್ತಿದ್ದಾರೆ.

ಟ್ವಿಟರ್​ನಲ್ಲಿ ಶೇರ್​ ಆಗುತ್ತಿದ್ದಂತೆ ನೆಟ್ಟಿಗರು, ಕ್ರಿಕೆಟ್​ ಅಭಿಮಾನಿಗಳು ಕಾಮೆಂಟ್​ ಪ್ರಹಾರ ನಡೆಸಿದ್ದಾರೆ. 337 ರನ್​ಗಳಷ್ಟು ಗುರಿಯಿರುವಾಗ ಹೀಗೆ ನಿರಾಸಕ್ತಿಯಿಂದ ಆಕಳಿಕೆ ತೆರೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸರ್ಫರಾಜ್​ ಅವರನ್ನು ವಿವಿಧ ಹೆಸರು ಹಿಡಿದು ಕರೆದಿದ್ದಲ್ಲದೆ, ಕಠಿಣ ಶಬ್ದಗಳ ಪ್ರಯೋಗ ಮಾಡಿ ಟ್ರೋಲ್​ ಮಾಡಿದ್ದಾರೆ. ಚಿತ್ರ ವಿಚಿತ್ರ ಮೆಮೆಗಳನ್ನು ಕಾಮೆಂಟ್​ನಲ್ಲಿ ಶೇರ್​ ಮಾಡಿ ಸರ್ಫರಾಜ್​ ಅವರ ಕಾಲೆಳೆದಿದ್ದಾರೆ. ಇವರೊಬ್ಬ ಸ್ಲೀಪ್​ ಫೀಲ್ಡರ್​ ಎಂದೂ ಅಣಕಿಸಿದ್ದಾರೆ. ಏನು ಸರ್ಫ್​ರಾಜ್​ ಅವರೇ ನಿನ್ನೆ ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲವಾ? ಈಗ ಸರಿಯಾಗಿ ತಿಂದಿದ್ದೀರಿ ಎನ್ನಿಸುತ್ತದೆ ಹಾಗಾಗಿ ಆಕಳಿಸುತ್ತಿದ್ದಿರಿ ಅಲ್ವಾ ಎಂದೆಲ್ಲ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Comments are closed.