ಮ್ಯಾಂಚೆಸ್ಟರ್: ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು ಈಗಾಗಲೇ ಭಾರತದ ಬ್ಯಾಟಿಂಗ್ ಮುಗಿದು ಪಾಕ್ಗೆ 337 ರನ್ಗಳ ಗುರಿ ನೀಡಿದೆ. ಮಳೆ ಕೂಡ ಆಗಾಗ ಕಾಡುತ್ತಿದೆ. ಹೀಗೆಲ್ಲ ಇರುವಾಗ ಪಾಕ್ ನಾಯಕ ಮೈದಾನದಲ್ಲಿ ಮಾಡಿದ ಕೆಲಸವೊಂದು ವಿಪರೀತ ಟ್ರೋಲ್ ಆಗುತ್ತಿದೆ.
ಟಾಸ್ ಗೆದ್ದ ಪಾಕಿಸ್ತಾನ ಭಾರತಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಕೊಟ್ಟಿತ್ತು. ಭಾರತದ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ನಾಯಕ ಸರ್ಫರಾಜ್ ಅಹಮ್ಮದ್ ಆಕಳಿಕೆ ತೆಗೆಯುತ್ತ ನಿಂತಿರುವ ಪೋಟೋವೊಂದು ವಿಪರೀತ ವೈರಲ್ ಆಗಿದ್ದು, ಅವರ ಅಭಿಮಾನಿಗಳೂ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಹಲವರು ಟೀಕೆ ಮಾಡುತ್ತಿದ್ದಾರೆ.
ಟ್ವಿಟರ್ನಲ್ಲಿ ಶೇರ್ ಆಗುತ್ತಿದ್ದಂತೆ ನೆಟ್ಟಿಗರು, ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ಪ್ರಹಾರ ನಡೆಸಿದ್ದಾರೆ. 337 ರನ್ಗಳಷ್ಟು ಗುರಿಯಿರುವಾಗ ಹೀಗೆ ನಿರಾಸಕ್ತಿಯಿಂದ ಆಕಳಿಕೆ ತೆರೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸರ್ಫರಾಜ್ ಅವರನ್ನು ವಿವಿಧ ಹೆಸರು ಹಿಡಿದು ಕರೆದಿದ್ದಲ್ಲದೆ, ಕಠಿಣ ಶಬ್ದಗಳ ಪ್ರಯೋಗ ಮಾಡಿ ಟ್ರೋಲ್ ಮಾಡಿದ್ದಾರೆ. ಚಿತ್ರ ವಿಚಿತ್ರ ಮೆಮೆಗಳನ್ನು ಕಾಮೆಂಟ್ನಲ್ಲಿ ಶೇರ್ ಮಾಡಿ ಸರ್ಫರಾಜ್ ಅವರ ಕಾಲೆಳೆದಿದ್ದಾರೆ. ಇವರೊಬ್ಬ ಸ್ಲೀಪ್ ಫೀಲ್ಡರ್ ಎಂದೂ ಅಣಕಿಸಿದ್ದಾರೆ. ಏನು ಸರ್ಫ್ರಾಜ್ ಅವರೇ ನಿನ್ನೆ ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲವಾ? ಈಗ ಸರಿಯಾಗಿ ತಿಂದಿದ್ದೀರಿ ಎನ್ನಿಸುತ್ತದೆ ಹಾಗಾಗಿ ಆಕಳಿಸುತ್ತಿದ್ದಿರಿ ಅಲ್ವಾ ಎಂದೆಲ್ಲ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
Comments are closed.