ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸುಮಲತಾ ಅಂಬರೀಷ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಅಂಬರೀಷ್ಗೆ ಅನಾರೋಗ್ಯವಿರುವ ಕಾರಣ ಸುಮಲತಾಗೆ ಟಿಕೆಟ್ ನೀಡಲಾಗುವುದು. ಇದಕ್ಕೆ ಅಂಬರೀಷ್ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ತಯಾರಿಕೆ ಸಭೆಯಲ್ಲಿ ಸುಮಲತಾ ಹೆಸರು ಕೇಳಿಬಂದಿದೆ. ಮಂಡ್ಯದಿಂದ ಅಂಬರೀಷ್, ಸುಮಲತಾ, ಗಣಿಗ ರವಿಕುಮಾರ್ ಹೆಸರನ್ನು ಹೈಕಮಾಂಡ್ಗೆ ಶಿಫಾರಸು ಮಾಡಲಾಗುವುದು ಎಂದು ಅಂಬರೀಷ್ ಆಪ್ತವಲಯದಿಂದ ಮಾಹಿತಿ ಸಿಕ್ಕಿದೆ.
Comments are closed.