ಮನೋರಂಜನೆ

ನಾವಿಬ್ಬರೂ ಸ್ವಇಚ್ಛೆಯಿಂದ ವಿವಾಹವಾಗಿದ್ದೇವೆ: ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ ಲಕ್ಷ್ಮಿ ನಾಯ್ಕ್

Pinterest LinkedIn Tumblr

ಬೆಂಗಳೂರು: ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಹಾಗೂ ಚಲನಚಿತ್ರ ನಿರ್ಮಾಪಕ ಸುಂದರ್ ಗೌಡ ಇಂದು ಯಲಹಂಕ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾರೆ.

ನಾವಿಬ್ಬರೂ ಸ್ವಇಚ್ಥೆಯಿಂದ ಮದುವೆಯಾಗಿದ್ದೇವೆ, ನಮ್ಮ ಮದುವೆಗೆ ಯಾರ ಒತ್ತಾಯವೂ ಇಲ್ಲ ಎಂದು ಪೊಲೀಸರ ಮುಂದೆ ನವದಂಪತಿ ಹೇಳಿಕೆ ದಾಖಲಿಸಿದ್ದಾರೆ.

ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಮಾಯಕೊಂಡ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ಪುತ್ರಿ ಲಕ್ಷ್ಮೀ ಮೈಸೂರಿನಲ್ಲಿ ವಿವಾಹವಾಗಿದ್ದರು. ವಿವಾಹವಾದ ನಂತರ ನಟ ದುನಿಯಾ ವಿಜಯ್ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಇನ್ನೂ ನಟ ದುನಿಯಾ ವಿಜಯ್ ಜೊತೆ ಯಲಹಂಕ ನ್ಯೂ ಟೌನ್ ಠಾಣೆಗೆ ಆಗಮಿಸಿದ ದಂಪತಿ ಇನ್ಸ್ ಪೆಕ್ಟರ್ ಮಂಜುನಾಥ್ ಮುಂದೆ ಇಬ್ಬರೂ ಸ್ವಇಚ್ಚೆಯಿಂದಲೇ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.ಇನ್ನೂ ಲಕ್ಷ್ಮಿ ನಾಯ್ಕ್ ಅವರನ್ನು ತಮ್ಮ ಸೊಸೆ ಎಂದು ಒಪ್ಪಿಕೊಂಡಿರುವುದಾಗಿ ಸುಂದರ್ ಮನೆಯವರು ಹೇಳಿದ್ದಾರೆ.

Comments are closed.