ಬಿಗ್ಬಾಸ್ಮನೆಯ ಸದಸ್ಯರನ್ನು ಒಟ್ಟಾಗಿಸಿ ಎರಡು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ದಯಾಳ್ಪದ್ಮನಾಭ್. ಒಂದು ಚಿತ್ರಕ್ಕೆ ‘ಆ ಕರಾಳ ರಾತ್ರಿ’ ಎಂದು ಹೆಸರಿಟ್ಟಿದ್ದರೆ ಮತ್ತೊಂದು ಚಿತ್ರಕ್ಕೆ ‘ಪುಟ 109’ ಎಂದು ನಾಮಕರಣ ಮಾಡಿದ್ದಾರೆ. ಮೊನ್ನೆಯಷ್ಟೇ ಎರಡೂ ಸಿನಿಮಾಗಳ ಮುಹೂರ್ತ ನಡೆದಿದೆ.
ಆ ಕರಾಳ ರಾತ್ರಿ ಸಿನಿಮಾದಲ್ಲಿ ಸೆಸ್ಪನ್ಸ್ಮತ್ತು ಥ್ರಿಲ್ಲರ್ಅಂಶಗಳು ಇವೆಯಂತೆ. ಇದರ ಜತೆಗೆ ದುರಾಸೆ ಹಾಗೂ ಭಾವನಾತ್ಮಕ ಅಂಶಗಳು ಕೂಡ ಸಿನಿಮಾದಲ್ಲಿ ಇರುವುದು ವಿಶೇಷ. ಫ್ಲಾಶ್ಬ್ಯಾಕ್ನಲ್ಲಿ ಸಾಗುವ ಕಥೆ ಮತ್ತು ಅಂಧನ ಪಾತ್ರ ಸೇರಿದಂತೆ ನಾಲ್ಕು ಪ್ರಮುಖ ಪಾತ್ರಗಳು ಈ ಸಿನಿಮಾದಲ್ಲಿವೆ. ದೊಡ್ಡದಾಗಿ ಬೆಂಕಿ ಹತ್ತಿಕೊಳ್ಳುವ ಮೂಲಕ ಈ ಸಿನಿಮಾ ಶುರುವಾಗುವುದು ಮತ್ತೊಂದು ವಿಶೇಷ. ಮೂಡಿಗೆರೆ ಸಮೀಪ ಬಾಳೂರು ಎನ್ನುವ ಗ್ರಾಮದಲ್ಲಿ ಪುರಾತನ ಮನೆ ಹುಡುಕಿರುವ ನಿರ್ದೇಶಕರು, ಅಲ್ಲಿ ಚಿತ್ರದ ಶೂಟಿಂಗ್ಗೆ ಪ್ಲಾನ್ಮಾಡಿದ್ದಾರೆ. ಜೆಕೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ವೀಣಾ ಸುಂದರ್, ರಂಗಾಯಣ ರಘು, ಅನುಪಮ ಗೌಡ, ನವರಸನ್ಹೀಗೆ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.
ಪುಟ 109ರಲ್ಲಿ ಕ್ರೈಮ್ಥ್ರಿಲ್ಲರ್ಸ್ಟೋರಿಯನ್ನು ಹೇಳಿದ್ದಾರಂತೆ ನಿರ್ದೇಶಕರು. ಇಬ್ಬರು ವ್ಯಕ್ತಿಗಳು ದೀರ್ಘ ಕಾಲ ಚರ್ಚೆ ನಡೆಸುವ ಸಿನಿಮಾ ಇದಾಗಿದೆ. ಪೋಲೀಸ್ಅಧಿಕಾರಿಯಾಗಿ ಜೆಕೆ. ಬರಹಗಾರನ ಪಾತ್ರದಲ್ಲಿ ನವೀನ್ಕೃಷ್ಣ ನಟಿಸುತ್ತಿದ್ದಾರೆ. ವೈಷ್ಣವಿ ಚಂದ್ರನ್, ಯತಿರಾಜ್, ಸಿಹಿಕಹಿ ಚಂದ್ರು, ಡ್ಯಾನಿ ಮುಂತಾದವರ ತಾರಾ ಬಳಗವಿದೆ.
Comments are closed.