ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಋತುಮತಿ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದಾದರೆ, ದೇಗುಲಕ್ಕೆ ಬರುವ ಪುರುಷರು ಕನಿಷ್ಠ 48 ದಿನಗಳ ಕಾಲ ಕಠಿಣ ಬ್ರಹ್ಮಚರ್ಯು ಅನುಸರಿಸಿರುವುದನ್ನು ಪರೀಕ್ಷಿಸಲು ಯಂತ್ರವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸುವ ಮೂಲಕ ನಟ ಅಕ್ಷಯ್ ಕುಮಾರ್ ಪತ್ನಿ ನಟಿ ಟ್ವಿಂಕಲ್ ಖನ್ನಾ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಋತುಮತಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಇರುವ ಹಾಗೆ ಕಠಿಣ ಬ್ರಹ್ಮಚರ್ಯು ಪಾಲಿಸದ ಪುರುಷರಿಗೂ ಅಂಥದ್ದೇ ನಿರ್ಬಂಧ ವಿಧಿಸಿ ಎಂದು ಸವಾಲು ಹಾಕಿದ್ದಾರೆ.
Comments are closed.