ಕರಾವಳಿ

ಉಡುಪಿ(ಮಂದರ್ತಿ): ಬಾವಿಗೆ ಬಿದ್ದು ಚಿರತೆ ಸಾವು

Pinterest LinkedIn Tumblr

ಉಡುಪಿ: ಬಾವಿಗೆ ಬಿದ್ದ ಚಿರತೆಯೊಂದು ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಉಡುಪಿ ತಾಲೂಕಿನ ಮಂದಾರ್ತಿ ಸಮೀಪದ ಬಿಲ್ಲಾಡಿಯ, ಭಂಡಾರಿ ಎಂಬಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಕತ್ತಲಿನಲ್ಲಿ ಬೇಟೆಯನ್ನರಿಸಿ ಬಂದ ಚಿರತೆಯು ಬಿಲ್ಲಾಡಿ ಎಂಬಲ್ಲಿದ್ದ ಬಾವಿಗೆ ಬಿದ್ದು ಒದ್ದಾಡಿತ್ತು. ಮುಂಜಾನೆ ಸಾರ್ವಜನಿಕರು ನೋಡುವ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು‌ ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅವರು ಆಗಮಿಸುವ ವೇಳೆ ಚಿರತೆ ಸತ್ತಿದೆ.

ಜೀವ ಉಳಿಸಲು ಈಜಾಡಿ ಸುಸ್ತಾದ ನಂತರ ನೀರಿನಲ್ಲಿ‌ ಮುಳುಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಚಿರತೆ ಶವವನ್ನು ಮುಳುಗು ತಜ್ನರ ಮೂಲಕ ಮೇಲಕ್ಕೆತ್ತಿ ಅರಣ್ಯ ಇಲಾಖೆಯವರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Comments are closed.