ಮನೋರಂಜನೆ

ಕಾವೇರಿ ವಿಷಯ ಕೆದಕಿದ ತಮಿಳು ನಟ ವಿಶಾಲ್‌

Pinterest LinkedIn Tumblr

ಆರ್‌.ಕೆ. ನಗರ ಉಪ ಚುನಾವಣೆಯಲ್ಲಿ ಕೊನೆ ಕ್ಷಣದಿಂದ ಹೊರಬಿದ್ದಿದ್ದ ತಮಿಳು ನಟ ವಿಶಾಲ್‌ ಇದೀಗ ಕಾವೇರಿ ವಿಷಯವನ್ನು ಕೆದಕಿದ್ದಾರೆ. ತಮಿಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ತಮಿಳು ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಇವರು ಸದ್ಯದಲ್ಲೇ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಮೊದಲಿನಿಂದಲೂ ಕರ್ನಾಟಕ ಸರಕಾರ ತಮಿಳು ರೈತರ ಹಿತಕ್ಕೆ ಧಕ್ಕೆಯಾಗುವಂತೆ ವರ್ತಿಸುತ್ತಿದೆ. ಹಿರಿಯ ನಟರಾದ ರಜನೀಕಾಂತ್‌ ಹಾಗೂ ಕಮಲ್‌ ಹಾಸನ್‌ ಕರ್ನಾಟಕವನ್ನು ಪ್ರಶ್ನಿಸಬೇಕು ಎಂದು ವಿಶಾಲ್‌ ಒತ್ತಾಯಿಸಿದ್ದಾರೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾವೇರಿ ವಿವಾದವನ್ನು ಪ್ರಶ್ನಿಸುವ ತಮಿಳುನಾಡು ರಾಜಕಾರಣಿಗಳ ಸಾಲಿಗೆ ಸೇರಿದಂತೆ ಕಾಣುತ್ತಿರುವ ವಿಶಾಲ್‌ ಕರ್ನಾಟಕದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ನೆರೆಯ ರಾಜ್ಯದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಹಿರಿಯ ನಟರ ಮೌನ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

Comments are closed.