ಬೆಂಗಳೂರು: ಈ ಬಾರಿಯ ಬಿಗ್ಬಾಸ್ ಸೀಸನ್ ಬಹಳ ವಿಶೇಷತೆಯಿಂದ ಕೂಡಿತ್ತು. ಕಾರಣ ಹತ್ತಲವು….ಬಿಗ್ಬಾಸ್’ನಲ್ಲಿ ಚಂದನ್ ವಿನ್ನರ್ ಹಾಗು ದಿವಾಕರ್ ರನ್ನರ್ ಅಪ್ ಆಗಲು ಕಾರಣ ವೀಕ್ಷಕರ ಓಟ್ !
ಆದರೆ ವೀಕ್ಷಕರ ಓಟು ಈ ವಿಜೇತರ ಮೇಲೆ ಬೀಳಲು ಓರ್ವ ವ್ಯಕ್ತಿ ಕಾರಣ ಅನ್ನುವುದು ಬಿಗ್ಬಾಸ್ ಆರಂಭದಿಂದ ನೋಡುವವರಿಗೆ ಸ್ಪಷ್ಟವಾಗಿ ಕಾಣುತ್ತೆ. ಇಲ್ಲದಿದ್ದರೆ ಸೇಲ್ಸ್ ಮ್ಯಾನ್ ಆಗಿರುವ ದಿವಾಕರ್ ರನ್ನರ್ ಅಪ್ ಆಗಲು ಸಾಧ್ಯವೇ ಇರಲಿಲ್ಲ ಅನ್ನುವುದು ಸತ್ಯ !
ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್’ಗಳಿಗೂ ಬಿಗ್ಬಾಸ್ ಒಳಗೆ ಪ್ರವೇಶ ಕಲ್ಪಿಸಲಾಗಿತ್ತು. ಆದರೆ ಸಲೆಬ್ರಿಟಿಗಳು ಬಿಗ್ಬಾಸ್ ಮನೆಯಲ್ಲಿ ಆರಂಭದಲ್ಲಿಯೇ ನಡೆದುಕೊಂಡ ರೀತಿ ನೋಡಿದಾಗಲೇ ಸಲೆಬ್ರಿಟಿ ಅಲ್ಲದವರು ಬಿಗ್ಬಾಸ್ ಮನೆಯೊಳಗೇ ಹೆಚ್ಚು ದಿನ ಇರಲ್ಲ ಅನ್ನುವುದು ವೀಕ್ಷಕರು ಮನಗಂಡಿದ್ದು ಸತ್ಯ.
ಸೆಲೆಬ್ರಿಟಿ ಅನಿಸಿಕೊಂಡವರು ಬಿಗ್ಬಾಸ್ ಮನೆಯಲ್ಲಿ ಒಂದು ಗುಂಪು ಕಟ್ಟಿಕೊಂಡು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಲು ಮುಂದಾದಾಗ ಅದಕ್ಕೆ ಬ್ರೇಕ್ ಹಾಕಿದ್ದು ರಿಯಾಜ್. ಬಿಗ್ಬಾಸ್ ಮನೆಯಲ್ಲಿ ಸೆಲೆಬ್ರೆಟಿಗಳಿಗೆ ಸೆಡ್ಡು ಹೊಡೆಯಲೆಂದೇ ಕಾಮನ್ ಮ್ಯಾನ್’ಗಳ ಗುಂಪೊಂದನ್ನು ಸೃಷ್ಟಿಸಿದ್ದೇ ರಿಯಾಜ್.
ಸೆಲೆಬ್ರೆಟಿಗಳು ಕಿಚನ್ ಹಾಗು ಲಿವಿಂಗ್ ಏರಿಯಾದಲ್ಲಿ ತಮ್ಮವರೊಂದಿಗೆ ಕಾಲ ಕಳೆಯುತ್ತಿದ್ದರೆ ಕಾಮನ್ ಮ್ಯಾನ್’ಗಳು ಗಾರ್ಡನ್ ಏರಿಯಾವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು.
ಸಿಹಿಕಹಿ ಚಂದ್ರು, ಜೆಕೆ , ಜಗನ್, ಜಯ ಶ್ರೀನಿವಾಸನ್, ದಯಾಳ್ ಪದ್ಮನಾಭನ್, ಕೃಷಿ ತಪಂಡ, ಶ್ರುತಿ ಪ್ರಕಾಶ್, ಆಶಿತಾ, ಸುಮಾ, ತೇಜಸ್ವಿನಿ, ಅನುಪಮಾ ಗೌಡ ಸೆಲೆಬ್ರಿಟಿಗಳೊಂದಿಗೆ ಗುರುತಿಸಿಕೊಂಡರೆ, ರಿಯಾಜ್, ಸಮೀರ್ ಆಚಾರ್ಯ, ಚಂದನ್ ಶೆಟ್ಟಿ, ಮೇಘ, ದಿವಾಕರ್, ನಿವೇದಿತಾ ಗೌಡ ಕಾಮನ್ ಮ್ಯಾನ್ಗಳೆಂದು ತಮ್ಮನ್ನು ತಾವು ಗುರುತಿಸಿಕೊಂಡು ತಮ್ಮ ಆಟವನ್ನು ಆಡುತ್ತಿದ್ದರು.
ಚಂದನ್ ಶೆಟ್ಟಿ ಸೆಲೆಬ್ರಿಟಿ ಆಗಿದ್ದರೂ ಅವರು ರಿಯಾಜ್ ಅವರ ಕಾಮನ್ ಮ್ಯಾನ್ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಕಾಮನ್ ಮ್ಯಾನ್ಗಳನ್ನು ಒಂದು ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಸೆಲೆಬ್ರಿಟಿಗಳು ಆರಂಭದಲ್ಲಿಯೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾದರು.ಇದೇ ವೇಳೆ ದಿವಾಕರ್ ಅವರ ಮೇಲೆ ಸೆಲೆಬ್ರಿಟಿಗಳೆಲ್ಲ ಮುಗಿಬಿದ್ದಾಗ ರಿಯಾಜ್ ಅವರು ದಿವಾಕರ್ ಬೆಂಬಲಕ್ಕೆ ನಿಂತು ಸೆಲೆಬ್ರಿಟಿಗಳೊಂದಿಗೆ ವೈರತ್ವವನ್ನು ಕಟ್ಟಿಕೊಂಡರು.
ಈ ಕಾರಣದಿಂದಲೇ ಬಿಗ್ ಬಾಸ್ ವೀಕ್ಷಕರು ಕಾಮನ್ ಮ್ಯಾನ್’ಗಳ ಪರ ನಿಂತು ಓಟು ಹಾಕಲು ಆರಂಭಿಸಿದರು. ಇದರಿಂದ ಸೆಲೆಬ್ರಿಟಿಗಳು ಯಾರು ಕೂಡ ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಸಾಧ್ಯ ಆಗಲಿಲ್ಲ.
ಆದರೆ ಕಾಮನ್ ಮ್ಯಾನ್ ಎಂದೇ ಗುರುತಿಸಿಕೊಂಡ ದಿವಾಕರ್ ಅನಂತರದ ದಿನಗಳಲ್ಲಿ ರಿಯಾಜ್ ಅವರೊಂದಿಗೆ ಬೇಕೆಂದೇ ಜಗಳಕ್ಕಿಳಿದು ಅವರ ಸ್ನೇಹವನ್ನು ಮುರಿದುಕೊಂಡರು. ಬಳಿಕ ಸೆಲೆಬ್ರಿಟಿಗಳ ಜೊತೆ ದಿವಾಕರ್ ಸೇರಿಕೊಂಡು ತನ್ನ ಆಟವನ್ನು ಮುಂದುವರಿಸಿದರು.
ಸೆಲೆಬ್ರಿಟಿಗಳ ವಿರುದ್ಧ ಕೆಂಡ ಕಾರುತ್ತಿದ ವೀಕ್ಷಕರು ಕೊನೆಯಲ್ಲಿ ಚಂದನ್-ದಿವಾಕರ್ ಪರವಾಗಿ ನಿಂತು ವಿಜಯಮಾಲೆ ಕೊರಳಿಗೆ ಹಾಕಿಕೊಳ್ಳುವಂತೆ ಮಾಡಿದರು.
Comments are closed.