ಮನೋರಂಜನೆ

ಬಿಗ್‌ಬಾಸ್‌‌ ಮನೆಯಲ್ಲಿ ದಿವಾಕರ್’ನ ವರ್ತನೆಗೆ ಆಕ್ರೋಶ ! ರಿಯಾಜ್ ಜೊತೆ ಬಿಗ್ ಫೈಟ್ ; ಹಗೆತನ ಸಾಧಿಸುತ್ತಿರುವ ದಿವಾಕರ್ !

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್‌‌ ಮನೆಯಲ್ಲಿ ಈಗ ಆಟದ ಮಧ್ಯೆ ಬಿಗ್ ಫೈಟ್ ಶುರುವಾಗಿದೆ. ರಿಯಾಜ್’ನೊಂದಿಗೆ ಗೆಳೆತನ ಮುರಿದಿರುವ ದಿವಾಕರ್ ಬುಧವಾರ ಬಿಗ್‌ಬಾಸ್‌‌ ಮನೆಯಲ್ಲಿ ಬೇಕೆಂದೇ ರಿಯಾಜ್ ಜೊತೆ ಕಿರಿಕ್ ಮಾಡಿಕೊಂಡಿದ್ದು, ಇವರಿಬ್ಬರ ಜಗಳ ವಿಕೋಪಕ್ಕೆ ತೆರಳಿತ್ತು.

ರಿಯಾಜ್ ಮೇಲೆ ಬೇಕಂತಲೇ ಹಗೆತನಕ್ಕಿಳಿದ ದಿವಾಕರ್ ವರ್ತನೆ, ಭಾಷೆ ಬಗ್ಗೆ ಬಿಗ್‌ಬಾಸ್‌‌ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಪದೇ ಪದೇ ರಿಯಾಜ್ ಮೇಲೆ ದಿವಾಕರ್ ಮಾಡುತ್ತಿರುವ ಟಾರ್ಗೆಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಇರುವ ಸೌಹಾರ್ದತೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಗಂಧದ ಗುಡಿ ಎನ್ನುವ ಟಾಸ್ಕನ್ನು ಬಿಗ್ಬಾಸ್ ನೀಡಿತ್ತು.

ಮನೆಯ ಕ್ಯಾಪ್ಟನ್ ಜಗನ್, ದಿವಾಕರ್, ಸಮೀರಾಯಾಚಾರ್ಯ, ಅನುಪಮಾ, ನಿವೇದಿತಾ, ಆಶಿತಾ ಪ್ರಾಣಿಗಳಾಗಿದ್ದರೆ, ಜೆಕೆ, ರಿಯಾಜ್, ಚಂದನ್ ಶೆಟ್ಟಿ, ಕ್ರುಷಿ, ಶ್ರುತಿ, ವೈಷ್ಣವಿ ಕಾಡು ಜನರಾಗಿದ್ದಾರೆ, ಮನೆಗೆ ಅತಿಥಿಯಾಗಿ ಬಂದಿರುವ ಅಕುಲ್ ಬಾಲಾಜಿಗೆ ಕಾಡು ಜನರ ಸಹಾಯದಿಂದ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಕೆಲಸವನ್ನು ನೀಡಲಾಗಿತ್ತು.

ಕಾಡು ಪ್ರಾಣಿಗಳನ್ನು ಹಿಡಿಯುವ ವೇಳೆ ಎರಡು ಗುಂಪುಗಳ ಮಧ್ಯೆ ಪದೇ ಪದೇ ಜಗಳ ನಡೆಯುತ್ತಲೇ ಇತ್ತು. ಜಗನ್ ಅವರು ರಿಯಾಜ್ ಹಾಗು ಚಂದನ್ ಜೊತೆ ಜಗಳವಾಡಿದರು.

ರಿಯಾಜ್ ಜೊತೆ ಜಗಳವಾಡಿಕೊಂಡು ಗೆಳೆತನಕ್ಕೆ ಬ್ರೇಕ್ ಹಾಕಿರುವ ದಿವಾಕರ್, ಕೆಲವು ದಿನಗಳಿಂದ ರಿಯಾಜ್’ರನ್ನು ಟಾರ್ಗೆಟ್ ಮಾಡುತ್ತಲೇ ಹಗೆತನ ತೀರಿಸುತ್ತಲೇ ಬಂದಂತಿದೆ.

ಗಂಧದ ಗುಡಿ ಟಾಸ್ಕಿನಲ್ಲಿ ರಿಯಾಜ್ ಮೇಲೆ ವಿನಾ ಕಾರಣ ದಿವಾಕರ್ ತಗಾದೆ ತೆಗೆಯುತ್ತಲೇ ಇದ್ದರು. ಕೊನೆಗೆ ರಿಯಾಜ್’ರನ್ನು ಬೇಕಂತಲೇ ಅಸಹ್ಯವಾಗುವಂತೆ ಬೈಯ್ಯ ತೊಡಗಿದರು. ಥೂ …ಛೀ ಎಂದು ದಿವಾಕರ್ ಆರಂಭದಲ್ಲಿ ಬೈದು ರಿಯಾಜ್’ಗೆ ಸಿಟ್ಟು ಬರುವಂತೆ ಮಾಡಿದರು.

ಈ ವೇಳೆ ರಿಯಾಜ್ ಕೂಡ ಪ್ರತ್ಯುತ್ತರವಾಗಿ ದಿವಾಕರ್’ಗೆ ಬೈಯ್ಯ ತೊಡಗಿದರು. ಇದೆಲ್ಲವನ್ನು ಮನೆಮಂದಿ ಮೂಕಪ್ರೇಕ್ಷಕರಂತೆ ನೋಡಿ ಆನಂದ ಪಟ್ಟುಕೊಂಡರು.

Comments are closed.