ಚಂಡೀಗಡ: ನಟಿ ಸನ್ನಿ ಲಿಯಾನ್ ಅವರನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯ ಪಾತ್ರದಲ್ಲಿ ತೋರಿಸದಂತೆ ಹರಿಯಾಣದ ಬಿಜೆಪಿ ಮುಖಂಡ ಸುರಲ್ ಅಮು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.
‘ಸನ್ನಿ ಲಿಯಾನ್ ಪಂಜಾಬಿನ ಹೆಣ್ಣುಮಗಳು. ನೆಲೆಸಿದ್ದುದು ವಿದೇಶದಲ್ಲಿ. ಆಕೆಯನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯಾಗಿ ಬಿಂಬಿಸುವುದನ್ನು ನಾವು ಸಹಿಸುವುದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಪದ್ಮಾವತಿ’ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ಲೀಲಾ ಬನ್ಸಾಲಿ ಅವರ ತಲೆ ಕಡಿದವರಿಗೆ ₹ 10 ಕೋಟಿ ಬಹುಮಾನ ನೀಡುವುದಾಗಿ ಇತ್ತೀಚೆಗೆ ಅವರು ಘೋಷಿಸಿದ್ದರು.
‘ಪದ್ಮಾವತಿ’ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿ ಇದೇ 9ರಂದು ಪಂಚಕುಲಾದಲ್ಲಿ ರ್ಯಾಲಿ ನಡೆಸುವುದಾಗಿ ಅವರು ಹೇಳಿದ್ದಾರೆ.
Comments are closed.