ಬೆಂಗಳೂರು: ಬಿಗ್ಬಾಸ್ಮನೆಯಲ್ಲಿ ಈ ವಾರ ಗಲಾಟೆ ಮಾಡಿಕೊಂಡ ದಿವಾಕರ್’ಗೆ ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ್ದು, ಕೋಪವನ್ನು ಹದ್ದುಬಸ್ತಿನಲ್ಲಿಡುವಂತೆ ಸೂಚಿಸಿದರು.
ಕಿಚ್ಚ ಸುದೀಪ್ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡ್’ನಲ್ಲಿ ಮನೆ ಮಂದಿಯ ಆಟದ ವೈಖರಿ ಬಗ್ಗೆ ಪ್ರಶಂಸಿಸುತ್ತಲೇ ದಿವಾಕರ್ ಕಳೆದ ವಾರ ಚಂದನ್ ಶೆಟ್ಟಿ ಜೊತೆ ಆಟದ ವೇಳೆ ಶರ್ಟ್ ಹರಿದುಹಾಕಿ ಗಲಾಟೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿದರು.
ಚಂದನ್ ಈ ವೇಳೆ ಯಾವುದೇ ರೀತಿಯ ಪ್ರತಿರೋಧ ತೋರಿಸದೆ ಸಂಯಮ ತೋರಿಸಿದ್ದನ್ನು ಹೊಗಳಿದರು. ಇನ್ನು ಮುಂದಾದರು ದಿವಾಕರ್ ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೆ ವೇಳೆ ಈ ವಾರದ ಅಟ್ಟದಲ್ಲಿ ರಿಯಾಜ್ ತಮ್ಮ ಬಳಿ ಇದ್ದ ದುಡ್ಡಿನಲ್ಲಿ ಎಲ್ಲ ಹೆಣ್ಮಕ್ಕಳಿಗೂ ಕಿವಿಯೋಲೆ ಕೊಡಿಸಿ, ಭಾವನಾತ್ಮಕ ಸಂಬಂಧವನ್ನು ಬಿಗ್ ಬಾಸ್ ಮನೆಯಲ್ಲಿ ಗಟ್ಟಿಗೊಳಿಸಿದ್ದನ್ನು ಸುದೀಪ್ ಕೊಂಡಾಡಿದರು.
ಬಿಗ್ಬಾಸ್ ಶೋ ಹಾಫ್ಸೆಂಚೂರಿ ಬಾರಿಸಿದ್ದು, ಮನೆಮಂದಿಗೆಲ್ಲ ಸಂತಸದ ಸುದ್ದಿಯಾಗಿತ್ತು. 50 ದಿನ ಪೊರೈಸಿದ ಹಿನ್ನೆಲೆ ಮನೆಯಲ್ಲಿ ಕೇಕ್ ಕಟ್ಮಾಡಿ ಸಂಭ್ರಮಿಸಲಾಯಿತು.
Comments are closed.