ತೆಲುಗು ನಟ ಅಲ್ಲು ಶಿರಿಶ್ ಮೊನ್ನೆಯಷ್ಟೇ “ಟಗರು’ ಚಿತ್ರದ ಟೀಸರ್ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದರು. ಅಂದು ಶಿವರಾಜಕುಮಾರ್ ಜೊತೆ ಹಾಡೊಂದಕ್ಕೆ ಎರಡು ಸ್ಟೆಪ್ ಕೂಡಾ ಹಾಕಿದ್ದರು. ಈಗ ಪುನೀತ್ ರಾಜಕುಮಾರ್ ಅಲ್ಲು ಶಿರಿಶ್ ಅವರ ಸಿನಿಮಾ ಸೆಟ್ಗೆ ಭೇಟಿ ಕೊಟ್ಟಿದ್ದಾರೆ. ಹೌದು, ಅಲ್ಲು ಶಿರಿಶ್ ನಾಯಕರಾಗಿರುವ “ಒಕ್ಕ ಕ್ಷಣಂ’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಸೆಟ್ಗೆ ಭೇಟಿಕೊಟ್ಟು, ಕೆಲ ಹೊತ್ತು ಅಲ್ಲು ಶಿರಿಶ್ ಜೊತೆ ಸಮಯ ಕಳೆದರು.
-ಉದಯವಾಣಿ
Comments are closed.