ಬೆಂಗಳೂರು: ಗೊಂದಲದ ಗೂಡಾಗಿದ್ದ ಬಿಗ್ಬಾಸ್ಮನೆಯಲ್ಲಿ ಶನಿವಾರ ಸುಕೃತ ಹೊರಬಿದ್ದಿದ್ದು, ಪ್ರಥಮ್, ಸಂಜನಾ, ಭುವನ್ಸುದ್ದಿ ಕೇಂದ್ರವಾಗಿದ್ದರು. ಕಿಚ್ಚ ಸುದೀಪ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಈ ಮೂವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆಯು ನಡೆಯಿತು.
ಸಂಜನಾ, ಭುವನ್ಮಧ್ಯೆ ಎಂಟ್ರಿ ನೀಡಿ ಸಂಜನಾಳನ್ನು ಪ್ರೀತಿಸಲು ಶುರು ಮಾಡಿಕೊಂಡಿದ್ದ ಪ್ರಥಮ್ ಬಗ್ಗೆ ಬಿಗ್ಬಾಸ್ಮನೆಯಲ್ಲಿ ದೊಡ್ಡ ಗೊಂದಲವೇ ಉಂಟಾಗಿತ್ತು. ಆದರೆ ಶನಿವಾರ ಸುದೀಪ್ ಇದಕ್ಕೆ ಅಂತ್ಯ ಹಾಡಲು ಸೂಚನೆ ನೀಡಿದರು. ಈ ಮೂವರನ್ನು ಪದೇ ಪದೇ ತರಾಟೆಗೆ ತೆಗೆದುಕೊಂಡ ಸುದೀಪ್, ನೀವು ನಿಮ್ಮ ಅರ್ಹತೆ, ಘನತೆಯನ್ನು ಕಾಪಾಡಿ ಕೊಂಡು ಆಟ ಆಡಿ ಎಂದರು.
ಸಂಜನಾ, ಭುವನ್ಮತ್ತು ಪ್ರಥಮ್ನಡುವಿನ ತ್ರಿಕೋನ ಪ್ರೇಮ. ‘ಐ ಲವ್ಯು’ ಅಂತ ಸಂಜನಾ ಹಿಂದೆ ಬಿದ್ದಿದ್ದ ಪ್ರಥಮ್ರನ್ನ ಆಗಾಗ ಭುವನ್ ವಿಚಾರಿಸಿಕೊಳ್ಳುತ್ತಿದ್ದರು. ಮತ್ತು ಸಂಜನಾ ಸಹ ಪ್ರಥಮ್ಬಗ್ಗೆ ಭುವನ್ಮುಂದೆ ಕಂಪ್ಲೇಂಟ್ಮಾಡುತ್ತಿದ್ದರು.
ಸುದೀಪ್ಮುಂದೆ ಎಲ್ಲವನ್ನೂ ಮಾತಾಡು ಎಂದು ಮನೆ ಸದಸ್ಯರೆಲ್ಲ ಸಂಜನಾಗೆ ಹೇಳಿದ್ದುಂಟು. ಅದೇ ರೀತಿ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್ನಲ್ಲೂ ಕೂಡ ಈ ಕುರಿತು ಚರ್ಚೆಯಾಯ್ತು. ಭುವನ್, ಸಂಜನಾ ಮತ್ತು ಪ್ರಥಮ್ಗೆ ಕಿಚ್ಚ ಸುದೀಪ್ಒಂಚೂರು ಖಡಕ್ಕಾಗಿಯೇ ವಾರ್ನಿಂಗ್ಮಾಡಿದರು.
‘ನೀವು ಹೊರಗಡೆ ಲೈಫ್ನ್ನ ಲೀಡ್ಮಾಡಿ ಒಳಗೆ ಹೋದವರು. ನಿಮಗೆ ಯಾವುದನ್ನ ಹೇಗೆ ನಿಭಾಯಿಸಬೇಕು ಎಂದು ಗೊತ್ತು’ ಎಂಬ ಮಾತನ್ನ ಪರೋಕ್ಷವಾಗಿ ಹೇಳಿದರು. ಈ ವೇಳೆ ಪ್ರಥಮ್ಗೂ ಕೂಡ ‘ಇಷ್ಟು ದಿನ ಗಳಿಸಿದಂತಹ ಒಂದು ಮರ್ಯಾದೆಯನ್ನ ಕಳೆದುಕೊಳ್ಳಬೇಡಿ’ ಎಂದು ಬುದ್ಧಿ ಮಾತನ್ನ ಹೇಳಿದರು.
ಇನ್ನು ಸಂಜನಾ ಮತ್ತು ಭುವನ್ಗೂ ಸಹ ಮಾತಿನ ಚಾಟಿ ಬೀಸಿದ ಕಿಚ್ಚ, ಒಬ್ಬರ ತಂಟೆಗೆ ಇನ್ನೊಬ್ಬರು ಹೋಗದಿರುವುದು ಒಳ್ಳೆಯದು ಎಂಬ ರೀತಿಯಲ್ಲಿ ಎಚ್ಚರಿಕೆ ನೀಡಿದರು. ಅವರವರ ಸಮಸ್ಯೆಯನ್ನ ಅವರವರೇ ಬಗೆಹರಿಸಿಕೊಳ್ಳಲಿ ಎಂಬ ಅರ್ಥದಲ್ಲಿ ಕಿಚ್ಚ ಸುದೀಪ್ಮಾತನಾಡಿದರು.
Comments are closed.