ಮನೋರಂಜನೆ

ಮಾಸ್ತಿಗುಡಿ ದುರಂತ: ಸಾವಿಗೂ ಮುನ್ನ ಉದಯ್ ಆಡಿದ ಕೊನೆ ಮಾತುಗಳು

Pinterest LinkedIn Tumblr

udayಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾಹಸ ಮಾಡುವಾಗ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಅಂತ್ಯ ಕಂಡಿದ್ದಾರೆ. ಅವರ ಸಾವಿಗೂ ಮುನ್ನ ಸಾಹಸ ಮಾಡುವ ಬಗ್ಗೆ ಮಾದ್ಯಮಗಳೊಂದಿಗೆ ಉದಯ್ ಮಾತನಾಡಿದ್ರು.

ಹೆಲಿಕಾಪ್ಟರ್‍ನಿಂದ 100 ಅಡಿ ಮೇಲಿನಿಂದ ದುನಿಯಾ ವಿಜಯ್ ಹಾಗೂ ಖಳನಟರಾದ ಅನಿಲ್ ಹಾಗೂ ಉದಯ್ ಜಿಗಿಯಬೇಕಿತ್ತು. ಇದಕ್ಕೂ ಮುಂಚೆ ಟಿವಿ ವರದಿಗಾರರೊಂದಿಗೆ ಅನಿಲ್ ಹಾಗೂ ಉದಯ್ ಮಾತನಾಡಿದ್ರು. ಏನ್ ಉದಯ್ ಅವರೇ ನಿಮಗೆ ಈಜು ಬರುತ್ತಾ? ಯಾವ ರೀತಿ ತಯಾರಿ ನಡೆಸಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಈಜು ಬರುತ್ತೆ. ಬಿದ್ದು ಎದ್ದು ಬರ್ತೀನಿ. ಇದಕ್ಕಾಗಿ ಯಾವುದೇ ತಯಾರಿ ನಡೆಸಿಲ್ಲ ಅಂದಿದ್ರು.

ಜಿಗಿಯಲಾ ಅಥವಾ ನಿರ್ದೇಶಕರಿಗೆ ಕೈ ಕೊಟ್ಟು ಓಡಿಹೋಗ್ಲಾ ಅಂತ ಯೋಚಿಸ್ತಿದ್ದೀರಾ ಅಂತ ವರದಿಗಾರರು ಕೇಳಿದ ಪ್ರಶ್ನೆಗೆ ಉದಯ್ ನಗುತ್ತಲೇ ಉತ್ತರಿಸಿದ್ರು. ಬಂದು ಸಿಕ್ಹಾಕೊಂಡು ಆಗಿದೆ. ಎಲ್ಲಿ ಓಡಿಹೋಗೋದು. ಹೋದ್ರೂ ಹಿಡ್ಕೊಂಡು ಬರ್ತಾರೆ ಎಂದು ಮಾತು ಆರಂಭಿಸಿದ ಉದಯ್, ತುಂಬಾ ಒಳ್ಳೇ ಅನುಭವ ಇದು. ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ಸಾಹಸ ಮಡುತ್ತಿದ್ದೇನೆ ಅಂದ್ರು.

ಈ ಸಾಹಸದ ಬಗ್ಗೆ ನಿನ್ನೆ ಹೇಳಿದಾಗ ನನಗೆ ಜ್ವರ ಇದೆ ಎಂದು ಹೇಳಿದ್ದೆ. ಏನಾದ್ರೂ ಬದಲಾವಣೆ ಮಾಡ್ತಾರೇನೋ ಅಂತ. ಪರವಾಗಿಲ್ಲ 50- 60 ಅಡಿ ಅಷ್ಟೆ ಎಂದು ಹೇಳಿ ಇಲ್ಲಿ ಬಂದು 100 ಅಡಿ ಅಂತ ಹೇಳ್ತಿದ್ದಾರೆ. ಏನೂ ಮಾಡೋಕೆ ಆಗಲ್ಲ. ಭಗವಂತನ ಮೇಲೆ ಭಾರ ಹಾಕಿ, ತಂದೆ ತಾಯಿ ಪ್ರೀತಿ ವಿಶ್ವಾಸ ಎಷ್ಟಿದೆ ಅಂತ ಇದ್ರಲ್ಲಿ ನೋಡ್ಬೇಕು ಅಷ್ಟೆ ಅಂತ ಹೇಳಿದ್ರು. ಆದ್ರೆ ಈ ರೀತಿ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಉದಯ್ ದುರಂತ ಅಂತ್ಯ ಕಂಡಿದ್ದಾರೆ.

Comments are closed.