ಬೆಂಗಳೂರು: ಟಿಪ್ಪು ಜಯಂತಿ ಆಚರಿಸಿ ಈ ಸರ್ಕಾರ ಮುಸಲ್ಮಾನ ಬಂಧುಗಳಿಗೆ ಚಿನ್ನದ ಹೊದಿಕೆ ಹಾಕಿಸುತ್ತಾ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಣೆ ವಿರುದ್ಧ ಸಿಟ್ಟನ್ನು ಹೊರಹಾಕಿದ್ದಾರೆ.
ಇಂದು ಹೆಚ್ಡಿಕೆ ಸರ್ಕಾರದ ವಿರುದ್ಧ ಸಿಕ್ಕಾಪಟ್ಟೆ ಗುಡುಗಿದ್ರು. ಬಿಜೆಪಿಯವರ ಮೇಲೂ ಹರಿಹಾಯ್ದುರು. ವಿಧಾನಸೌಧದಲ್ಲಿ ಸಿಕ್ಕಿದ್ದ ಕೋಟಿ ಕೋಟಿ ಹಣದ ಬಗ್ಗೆ ಯಡಿಯೂರಪ್ಪನವರಿಗೆ ಮಾಹಿತಿ ಇದೆ ಅಂತ ಹೇಳಿದ್ದೆ. ಆದ್ರೆ ಈ ವಿಷಯ ಮರೆಮಾಚಲು ನನ್ನ ಮೇಲೆ ಭೂಕಬಳಿಕೆ ಆರೋಪ ಹೊರಿಸಿದ್ರು ಅಂತ ಹಿರೇಮಠ್, ಹಾಗು ಸುರೇಶ್ ಕುಮಾರ್ ಆರೋಪಕ್ಕೆ ತಿರುಗೇಟು ಕೊಟ್ರು. ದಲಿತರ ಭೂಮಿ ಕಬಳಿಸಿದ್ದೀನಿ ಅಂತಿರೋ ಹಿರೇಮಠ್ ಅವರು ಸಚಿವ ಕಾಗೋಡು ತಿಮ್ಮಪ್ಪನವರ ಜೊತೆ ಬಂದು ಪರಾಮರ್ಶಿಸಲಿ ಅಂದ್ರು.
ಮಗನ ಜಾಗ್ವಾರ್ ಸಿನಿಮಾ ವಿದೇಶದಲ್ಲಿ ಚಿತ್ರೀಕರಿಸಿದ್ದನ್ನೂ ಪ್ರಶ್ನೆ ಮಾಡಿದ್ರು. ಆದ್ರೆ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ಇನ್ಕಂ ಟ್ಯಾಕ್ಸ್ ಅಧಿಕಾರಿಗಳ ಮೂಲಕ ಪರೀಕ್ಷೆ ಮಾಡಿಕೊಳ್ಳಿ ಅಂತ ಸುರೇಶ್ಕುಮಾರ್ಗೆ ತಿರುಗೇಟು ಕೊಟ್ರು. ನನ್ನ ಮಗನ ಜೀವನ ಸೆಟ್ಲಾಗಿದೆ. ನನಗೇನು ದುಡ್ಡು ಮಾಡೋ ಆಸೆಯಿಲ್ಲ. ಜನ ಆಶೀರ್ವಾದ ಮಾಡಿ ನಮ್ಮ ಸರ್ಕಾರವನ್ನ ಅಧಿಕಾರಕ್ಕೆ ತಂದ್ರೆ ನಾನೇನು ಅಂತ ತೋರಿಸ್ತೀನಿ ಅಂತ ಹೆಚ್ಡಿಕೆ ಸವಾಲೆಸೆದ್ರು.
Comments are closed.