ಶನಿವಾರ ಬಿಗ್ಬಾಸ್ ಮನೆಯಿಂದ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಔಟ್ (ಹೊರಗೆ ಹೋಗಿದ್ದಾರೆ) ಆಗಿದ್ದಾರೆ. ಯಾರು ಊಹಿಸದ ರೀತಿಯಲ್ಲಿ ಶೀತಲ್ಶೆಟ್ಟಿ ಹಾಗು ಶಾಲಿನಿ ಹೊರಬಿದ್ದಿದ್ದಾರೆ. ಇಂದು ನಡೆದ ಬಿಗ್ ಬಾಸ್ ಶೋದಲ್ಲಿ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಮನೆ ಮಂದಿಗೆ ಡಬ್ಬಲ್ ಶಾಕ್ ನೀಡಿದ್ದಾರೆ.
ಆದರೆ ಬಿಗ್ಬಾಸ್ಮನೆಯಿಂದ ಇಬ್ಬರನ್ನು ಹೊರಗೆ ಕಳುಹಿಸಲಾಗಿದ್ದರೂ ಅದರಲ್ಲಿ ಶೀತಲ್ಶೆಟ್ಟಿ ಮಾತ್ರ ಸ್ಪರ್ಧೆಯಿಂದ ಔಟಾಗಿದ್ದು, ಶಾಲಿನಿ ಅವರು ಸಿಕ್ರೆಟ್ ರೂಂನಲ್ಲಿದ್ದುಕೊಂಡು ತಮ್ಮ ಆಟವನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಥಮ್, ಸಂಜನಾ, ಶೀತಲ್ಶೆಟ್ಟಿ, ರೇಖಾ ಹಾಗು ಶಾಲಿನಿ ನಾಮಿನೇಟ್ಆಗಿದ್ದರು. ಅದರಲ್ಲಿ ಸಂಜನಾ ಇಲ್ಲವೇ ರೇಖಾ ಔಟ್ ಆಗಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸುದೀಪ್ ಮನೆ ಮಂದಿಗೆ ನೀಡಿದ ಶಾಕ್ ಎಲ್ಲರನ್ನು ಒಮ್ಮೆಗೆ ಅಳುವಂತೆ ಮಾಡಿತು.
ಶಾಲಿನಿ ಮನೆಯಿಂದ ಔಟ್ ಆಗಿದ್ದಾರೆ ಎಂದು ಸುದೀಪ್ ಹೇಳುತ್ತಿದ್ದಂತೆ ಮಾಳವಿಕಾ ಅಳಲು ಆರಂಭಿಸಿದರು. ಮನೆಯ ಕ್ಯಾಪ್ಟನ್ಆಗಿರುವ ಮಾಳವಿಕಾಗೆ ಬಿಗ್ಬಾಸ್ವಿಶೇಷ ಅಧಿಕಾರವೊಂದನ್ನು ನೀಡಿದ್ದ ಹಿನ್ನೆಲೆಯಲ್ಲಿ ಅವರು ಶಾಲಿನಿಯವರನ್ನು ನೇರವಾಗಿ ನಾಮಿನೇಟ್ಮಾಡಿದ್ದರು. ‘ತನ್ನಿಂದಲೇ ನೀನು ಇಂದು ಹೊರಗೆ ಹೋಗುತ್ತಿದ್ದಿ’ ಎಂದು ಮಾಳವಿಕಾ ಅಳಲು ಶುರು ಮಾಡಿದರು. ನಂತರ ಶಾಲಿನಿ ಸಮಾಧಾನ ಪಡಿಸಿ ಹೊರನಡೆದರು.
ಬಿಗ್ಬಾಸ್ಮನೆಯಿಂದ ಹೋಗುವಾಗ ಶೀತಲ್ ಹಾಗು ಶಾಲಿನಿಗೆ ಅಧಿಕಾರವೊಂದನ್ನು ನೀಡಿದರು. ಅದರಂತೆ ಬಿಗ್ಬಾಸ್ಮನೆಯಲ್ಲಿ ಬೆಳಗ್ಗೆ ಎದ್ದು ಎಲ್ಲರ ಬಟ್ಟೆ ಹೊಗೆಯುವ ಪನಿಷ್ಮೆಂಟ್ನೀಡಲಾಗಿತ್ತು. ಈ ವೇಳೆ ಅವರು ಭುವನ್ ಹೆಸರು ಸೂಚಿಸಿದರು.
Comments are closed.