ಮನೋರಂಜನೆ

ಕಾವೇರಿ ವಿಷಯದ ಕುರಿತು ಮಾಧ್ಯಮದವರ ಮುಂದೆ ನಟ ಯಶ್ ಹಾಕಿದ ಸವಾಲು ಏನು ?

Pinterest LinkedIn Tumblr

yash

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಿಂದಾಗಿ ರಾಜ್ಯಕ್ಕೆ ರಾಜ್ಯ ಹೊತ್ತಿ ಉರಿಯುತ್ತಿರುವಾಗ ರಾಕಿಂಗ್ ಸ್ಟಾರ್ ಯಶ್ ಮಾತ್ರ ಅಮೆರಿಕಾದಲ್ಲಿದ್ದರು ಎಂದು ಮಾಧ್ಯಮದವರು ಬಿತ್ತರಿಸಿದ್ದು ಸಿಟ್ಟಿಗೆ ಕಾರಣವಾಗಿದ್ದು, ಮಾಧ್ಯಮದವರ ಬಗ್ಗೆ ಸಿಟ್ಟಿನ ಮಾತುಗಳನ್ನಾಡಿದ್ದಾರೆ.

ಮಾಧ್ಯಮದವರು ಕಾವೇರಿಗಾಗಿ ಗಲಾಟೆಗಳು ನಡೆಯುತ್ತಿದ್ದಾಗ ನಾನು ಅಮೆರಿಕಾದಲ್ಲಿದ್ದೆ ಎಂದು ಬಿಂಬಿಸಿವೆ. ಇದೇ ಮಾಧ್ಯಮಗಳಿಗೆ ನಾನು ಸವಾಲು ಹಾಕುತ್ತೇನೆ. ಯಾವುದೇ ಚಾನಲ್ ಆಗಲಿ, ಪ್ರೈಮ್ ಟೈಮ್ ನಲ್ಲಿ ಕೇವಲ ರೈತರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡುವುದಾದರೆ ಅದರಲ್ಲಿ ಉಚಿತವಾಗಿ ಭಾಗವಹಿಸುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

ಪ್ರತಿಭಟನೆಗಳಾದ ಸಂದರ್ಭದಲ್ಲಿ ಯಾಕೆ ಎಳೆದು ತರುತ್ತಾರೋ ಗೊತ್ತಿಲ್ಲ. ಪ್ರತಿಭಟನೆ ಮಾಡಿದರಷ್ಟೇ ನಾವು ರೈತರ ಪರ ಎಂಬ ಮಾತು ತಪ್ಪು. ಪ್ರತಿಭಟನೆಯಲ್ಲಿ ಭಾಗವಹಿಸಿ, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ. ರೈತರ ಸಮಸ್ಯೆ ಸಾಕಷ್ಟಿದೆ ಅಂತ ಯಶ್ ಮಧ್ಯಮದವರ ವಿರುದ್ಧ ಗುಡುಗಿದ್ದಾರೆ.

Comments are closed.