ಬೆಂಗಳೂರು: ತಮ್ಮ ಕನಸಿನ ಚಿತ್ರ ‘ಅಪೂರ್ವ’ ಸೋಲಿನ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಮಲಯಾಳಂ ಚಿತ್ರವೊಂದನ್ನು ರೀಮೇಕ್ ಮಾಡಲು ಸಿದ್ಧರಾಗಿದ್ದಾರೆ.
ಮಲಯಾಳಂನಲ್ಲಿ ಮಮ್ಮುಟ್ಟಿ ಮತ್ತು ನಯನ್ ತಾರಾ ನಟಿಸಿ ಹಿಟ್ ಆಗಿದ್ದ ‘ಪುದಿಯ ನಿಯಮಂ’ ಸಿನಿಮಾವನ್ನು ರವಿಮಾಮ ರೀಮೇಕ್ ಮಾಡುತ್ತಿದ್ದಾರೆ.
‘ದೃಶ್ಯ’ ಸಿನಿಮಾದಂತೆ ಕೌಟುಂಬಿಕ ಕಥಾಹೊಂದಿರುವ ಚಿತ್ರವಾಗಿದೆ ‘ಪುದಿಯ ನಿಯಮಂ’.
ಈ ಚಿತ್ರವನ್ನು ರೀಮೇಕ್ ಮಾಡುವ ಮೂಲಕ ಸ್ವಮೇಕ್ ಚಿತ್ರದ ಸೋಲಿನ ಆಘಾತದಿಂದ ಹೊರಬರಲು ರವಿಚಂದ್ರನ್ ಯತ್ನಿಸುತ್ತಿದ್ದಾರೆ ಎಂಬ ವದಂತಿಯೂ ಕನ್ನಡ ಚಿತ್ರೋದ್ಯಮದಿಂದ ಕೇಳಿ ಬರುತ್ತಿದೆ.
Comments are closed.