ನಾಯಕಿ ಪ್ರದಾನ ಚಿತ್ರ ಬಿಳಿಕುದುರೆ ಸೆಟ್ಟೇರಿದೆ.
ಮುಂಬೈ ಹುಡುಗಿ ಹನಿ ಪ್ರದಾನ ಪಾತ್ರದಲ್ಲಿ ನಟಿಸುತ್ತಿದ್ದು ಶೋಭರಾಜ್,ರಾಹುಲ್,ರೀನಾ ಸೇರಿದಂತೆ ಮತ್ತಿತರ ತಾರಾಗಣ ಚಿತ್ರಕ್ಕಿದೆ.
ಕಳೆದ ಹಲವಾರು ದಶಕಗಳಿಂದ ಚಿತ್ರರಂಗದಲ್ಲಿರುವ ನಂದಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಅವರೇ ಬಂಡವಾಳವನ್ನೂ ಹಾಕಿದ್ದಾರೆ.ಮುಂಬೈನಲ್ಲಿ ನೆಲೆಸಿರುವ ಕನ್ನಡಿಗ ಸಂತೋಷ್ ಚಿತ್ರಕ್ಕೆ ಕ್ಯಾಮರ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ವಿವರ ನೀಡಿದ ನಿದೇಶಕ ಕಮ್ ನಿರ್ಮಾಪಕ ನಂದಕುಮಾರ್ ನಿರ್ದೇಶಕನಾಗುವ ಹಂಬಲ ಬಹಳ ದಿನದಿಂದ ಇತ್ತು ಅದು ಈಗ ನೆರವೇರಿದೆ. ಇದೊಂದು ಮುದ್ದಾದ ಪ್ರೇಮಕಥೆಯ ಚಿತ್ರ.೧೫ ವರ್ಷದ ಹಿಂದೆ ಮಾಡಿಕೊಂಡಿದ್ದ ಕಥೆಯ ಎಳೆಯನ್ನು ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಟು ಮಾಡಲಾಗಿದೆ.
ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಮತ್ತಿತತರ ಕಡೆ ಚಿತ್ರೀಕರಿಸಲಾಗುವುದು ಆ ಬಳಿಕ ಮುಂಬೈನಲ್ಲಿ,ಮೂರನೇ ಹಂತದ ಚಿತ್ರೀಕರಣ ಮಾಡುವ ಗುರಿ ಹೊಂದಲಾಗಿದೆ.ಚಿತ್ರದಲ್ಲಿ ಹಾಡೊಂದನ್ನು ಪುನೀತ್ ರಾಜ್ಕುಮಾರ್ ಹಾಡು ಹಾಡಲಿದ್ದಾರೆ.ಮೂರು ಆಕ್ಷನ್ ಸನ್ನಿವೇಶಗಳಿದ್ದು ಮೂರನ್ನೂ ಥ್ರಿಲ್ಲರ್ ಮಂಜು ಮಾಡುತ್ತಿದ್ದಾರೆ.
ಯಶಸ್ ಸಂಕಲನಕಾರರಾಗಿದ್ದು ತೆಲುಗಿನ ರಾಹುಲ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ.ಮುದ್ದಾದ ಲವ್ಸ್ಟೋರಿಯ ಚಿತ್ರವನ್ನು ಜನರಿಗೆ ನೀಡುವುದು ನಮ್ಮ ಉದ್ದೇಶ ಅದಕ್ಕಾಗಿ ನಮ್ಮ ಪ್ರಯತ್ನ ಮುಂದುವರಿದೆ ಎಂದು ಹೇಳಿಕೊಂಡರು.
ಚಿತ್ರಕ್ಕೆ ಇನ್ನೂ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿಲ್ಲ.ಮೊದಲ ಹಂತದ ಚಿತ್ರೀಕರಣದ ಬಳಿಕ ಸಾಕಷ್ಟು ಸಮಯವಿರಲಿದ್ದು ಅಷ್ಟರ ವೇಳೆಗೆ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಲಾಗುವುದು ಎಂದು ವಿವರ ನೀಡಿದರು.
ಛಾಯಾಗ್ರಾಹಕ ಸಂತೋಷ್, ೩೦ ರಿಂದ ೪೦ ಕನ್ನಡ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ ಯಾರೂ ಹಣ ನೀಡಲಿಲ್ಲ. ಇದರಿಂದ ಬೇಜಾರಾಯಿತು ಹೀಹಾಗಿ ಬಾಂಬೆಯತ್ತ ಮುಖ ಮಾಡಿದೆ. ಈ ಸಿನಿಮಾವನ್ನು ದುಡ್ಡಿಗಾಗಿ ಮಾಡುತ್ತಿಲ್ಲ ಬದಲಾಗಿ ಸ್ನೇಹಕ್ಕಾಗಿ ಮಾಡುತ್ತಿರುವುದಾಗಿ ಹೇಳಿಕೊಂಡರು.
ನಾಯಕಿ ಹನಿ, ಮೊದಲ ಕನ್ನಡ ಚಿತ್ರ ನಾಯಕಿ ಪ್ರದಾನವಾಗಿರುವುದರಿಂದ ನಟಿಸಲು ಎದುರು ನೋಡುತ್ತಿದ್ದೇನೆ. ಇದುವರೆಗೂ ಆಗಿರುವ ಚಿತ್ರೀಕರಣ ಖುಷಿಕೊಟ್ಟಿದೆ ಎಂದರು. ಥ್ರಿಲ್ಲರ್ ಮಂಜು, ನೃತ್ಯ ನಿರ್ದೇಶಕ ಸುರೇಶ್ ಗುಟ್ಟಹಳ್ಳಿ ತಮ್ಮ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಥ್ರಿಲ್ಲರ್ ಮಂಜು ಮೂರು ಫೈಟ್ಗಳಿದ್ದು ಅವುಗಳನ್ನು ಚಿಂದಿ ಉಡಾಯಿಸುವುದಾಗಿ ಹೇಳಿಕೊಂಡರು.
Comments are closed.