ಮನೋರಂಜನೆ

ಮುಂಗಾರು ಮಳೆಯ ಮೊಲ ಈಗ ಭೂತ!

Pinterest LinkedIn Tumblr

muಕನ್ನಡ ಚಿತ್ರರಂಗಕ್ಕೆ ಇನ್ನೂ ಅದೆಷ್ಟು ಆತ್ಮಗಳು ಬರಲಿಕ್ಕಿದೆಯೋ ಗೊತ್ತಿಲ್ಲ. ಈ ಬಾರಿ ಹೊಸದೊಂದು ಚಿತ್ರದ ಮೂಲಕ ಇನ್ನೊಂದು ಜನಪ್ರಿಯ ಆತ್ಮ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಈ ಆತ್ಮ ಯಾರದ್ದು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ. ಆ ಆತ್ಮ “ಮುಂಗಾರು ಮಳೆ’ಯ ದೇವದಾಸನದ್ದು!

ಯೋಗರಾಜ್‌ ಭಟ್‌ ನಿರ್ದೇಶನದ ಮತ್ತು ಗಣೇಶ್‌ ಅಭಿನಯದ “ಮುಂಗಾರು ಮಳೆ’ ಚಿತ್ರವನ್ನು ನೀವು ನೋಡಿರಬಹುದು. ಆ ಚಿತ್ರದಲ್ಲಿ ನಾಯಕನಿಗೆ ಒಂದು ಮೊಲ ಸಿಗುತ್ತದೆ. ಅದಕ್ಕೆ ನಾಯಕ ಪ್ರೀತಂ, ದೇವದಾಸ್‌ ಎಂದು ಹೆಸರಿಡುತ್ತಾನೆ. ಚಿತ್ರ ಮುಗಿಯುವ ಹೊತ್ತಿಗೆ ಆ ಮೊಲ ಸತ್ತು ಹೋಗುತ್ತದೆ. ಈಗ ಅದರ ಆತ್ಮವನ್ನು “ರಿಕ್ತ’ ಚಿತ್ರದಲ್ಲಿ ವಾಪಸ್ಸು ತಂದಿದ್ದಾರೆ ನಿರ್ದೇಶಕ ಅಮೃತ್‌ ಕುಮಾರ್‌.

“ನೀವು “ಮಿಸ್ಟರ ಬೀನ್‌’ ಚಿತ್ರಗಳಲ್ಲಿ ಒಂದು ಗೊಂಬೆಯನ್ನು ನೋಡಿರಬಹುದು. ಅದೇ ತರಹ ಇಲ್ಲೂ ಒಂದು ಗೊಂಬೆ ಇರುತ್ತದೆ. ಅದರೊಳಗೆ “ಮುಂಗಾರು ಮಳೆ’ಯ ದೇವದಾಸ್‌ನ ಆತ್ಮ ಎಂಟ್ರಿ ಕೊಡುತ್ತದೆ. ಆ ನಂತರ ಅದು ನಾಯಕ ವಿಜಯ್‌ ಗೂ ಸಿಗುತ್ತದೆ. ಆಮೇಲೇನಾಗುತ್ತದೆ’ ಎನ್ನುವುದೇ ಚಿತ್ರದ ಸಸ್ಪೆನ್ಸ್‌ ವಿಷಯ.
-ಉದಯವಾಣಿ

Comments are closed.