ಪುನೀತ್ರಾಜ್ಕುಮಾರ್ ಅಭಿನಯದ “ಚಕ್ರವ್ಯೂಹ’ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ರಿಲೀಸ್ಗೆ ರೆಡಿಯಾಗಿದೆ. ಆದರೆ, ಸುದ್ದಿ ಮಾತ್ರ ಮಾಡ್ತಾನೇ ಇದೆ. ಈ ಚಿತ್ರದಲ್ಲಿ ಮೊದಲಿಗೆ ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ ಹಾಡೊಂದನ್ನು ಹಾಡಿದರು. ಅವರು ಹಾಡಿದ ಬಳಿಕ ನಟಿ ಕಾಜಲ್ ಅಗರ್ವಾಲ್ ಕೂಡ ಹಾಡೊಂದನ್ನು ಹಾಡಿಬಿಟ್ಟರು.
ಈಗ ಮತ್ತೂಂದು ಸುದ್ದಿಯೆಂದರೆ, ಕನ್ನಡದ ಮತ್ತೂಬ್ಬ ಸ್ಟಾರ್ ನಟ “ಚಕ್ರವ್ಯೂಹ’ಕ್ಕೆ ವಾಯ್ಸ ಕೊಡುತ್ತಿದ್ದಾರೆ. ಹೌದು, ಕಿಚ್ಚ ಸುದೀಪ್ “ಚಕ್ರವ್ಯೂಹ’ ಚಿತ್ರಕ್ಕೆ ಹಿನ್ನೆಲೆ ದನಿ ಕೊಡುತ್ತಿದ್ದಾರೆ. ಚಿತ್ರದ ಆರಂಭ, ಮಧ್ಯೆ ಹಾಗು ಕ್ಲೈಮ್ಯಾಕ್ಸ್ನಲ್ಲಿ ಸುದೀಪ್ ಒಂದಷ್ಟು ಮಾತುಗಳನ್ನಾಡಲಿದ್ದಾರೆ. ಅಷ್ಟಕ್ಕೂ ಪುನೀತ್ ಚಿತ್ರಕ್ಕೆ ಸ್ಟಾರ್ನಟರು ಅದರಲ್ಲೂ ಪುನೀತ್ ಸರಿಸಮ ನಟರೊಬ್ಬರ ವಾಯ್ಸ ಬೇಕಾಗಿದ್ದರಿಂದ ಸುದೀಪ್ ಅವರು ಸೂಕ್ತವೆನಿಸಿ, ಅವರಿಂದ ವಾಯ್ಸ ಕೊಡಿಸುವ ನಿರ್ಧಾರಕ್ಕೆ ಬಂದಿದ್ದಾರೆ ನಿರ್ಮಾಪಕ ಲೋಹಿತ್.
ಇಡೀ ಚಿತ್ರದಲ್ಲಿ ಒಂದಷ್ಟು ಮುಖ್ಯವಾದ ಮಾತುಗಳು ಬರುತ್ತವೆ. ಅವುಗಳನ್ನು ಸುದೀಪ್ ಹೇಳಲಿದ್ದಾರೆ. ಸುದೀಪ್ಗೆ ಈ ಕುರಿತು ವಿವರಿಸಿದಾಗ, ಖುಷಿಯಿಂದಲೇ ಚಿತ್ರಕ್ಕೆ ವಾಯ್ಸ ಕೊಡೋಕೆ ಒಪ್ಪಿಕೊಂಡಿದ್ದಾರೆ. ಮುಂದಿನ ವಾರದಲ್ಲಿ ಅವರೊಂದು ಡೇಟ್ ಕೊಡ್ತಾರೆ. ಆಗ ವಾಯ್ಸ ರೆಕಾರ್ಡ್ ಮಾಡಲಾಗುವುದು ಎಂದು ನಿರ್ಮಾಪಕ ಲೋಹಿತ್ ಹೇಳುತ್ತಾರೆ. ಈಗಾಗಲೇ ಚಿತ್ರಕ್ಕೆ ಹಿನ್ನೆಲೆ ಸಂಗೀತ ನಡೆಯುತ್ತಿದ್ದು, ಮಾರ್ಚ್ ಅಂತ್ಯದಲ್ಲಿ ರಿಲೀಸ್ ಆಗಲಿದೆ ಎಂಬುದು ಅವರ ಮಾತು. ಚಿತ್ರವನ್ನು ಶರವಣನ್ ನಿರ್ದೇಶಿಸಿದ್ದಾರೆ. ರಚಿತಾರಾಮ್ ಈ ಚಿತ್ರದ ನಾಯಕಿ.
-ಉದಯವಾಣಿ