ಮನೋರಂಜನೆ

ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿಕೊಟ್ಟ ನಟ ಮಮ್ಮುಟ್ಟಿ; ನಮ್ಮನೇಗೆ ಬನ್ನಿ

Pinterest LinkedIn Tumblr

mammootty--facebook-and-storysizeಚೆನ್ನೈ: ತಮಿಳುನಾಡಿನಲ್ಲಿ ಸುರಿದ ಮಹಾಮಳೆಗೆ ಜನಜೀವನ ತತ್ತರಿಸಿಹೋಗಿದೆ. ಶಾಲಾ, ಕಾಲೇಜುಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ. ಹಲವೆಡೆ ರಕ್ಷಣಾ ಪಡೆಗಳು ಜನರಿಗೆ ಆಹಾರದ ಪೊಟ್ಟಣ ಸರಬರಾಜು ಮಾಡುತ್ತಿದ್ದಾರೆ. ಮತ್ತೊಂದೆಡೆ ಚೆನ್ನೈನಲ್ಲಿ ವಾಸವಾಗಿರುವ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿಯೂ ಕೂಡಾ ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ತೊಂದರೆಯಲ್ಲಿರುವವರು ನಮ್ಮ ಮನೆಗೆ ಬನ್ನಿ ಎಂದು ಫೇಸ್ ಬುಕ್ ನಲ್ಲಿ ಫೋಸ್ಟ್ ಸಂದೇಶ ರವಾನಿಸಿದ್ದಾರೆ.

ಹೌದು ಚೆನ್ನೈನ ವಿವಿಧೆಡೆ ಜನರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಮಮ್ಮುಟ್ಟಿ ಮುಮದಾಗಿದ್ದಾರೆ. 2.9 ಲಕ್ಷ ಫಾಲೋವರ್ಸ್ ಅನ್ನು ಹೊಂದಿರುವ ನಟ ಮಮ್ಮುಟ್ಟಿ ಫೇಸ್ ಬುಕ್ ನಲ್ಲಿ ಈ ಬಗ್ಗೆ ಸಂದೇಶವನ್ನು ಫೋಸ್ಟ್ ಮಾಡಿದ್ದಾರೆ.

ಅಣ್ಣಾನಗರ್, ಆರುಂಬಾಕಂ, ಅಮಿಂಜಿಕಾರೈ, ಎಂಎಂಡಿಎ ಕಾಲೋನಿ, ಚೂಲೈಮೇಡು ಸೇರಿದಂತೆ ಯಾವುದೇ ಪ್ರದೇಶದಲ್ಲಿ ಜನರು ಸಿಲುಕಿ ಹಾಕಿಕೊಂಡಿದ್ದರೆ, ಆಶ್ರಯ ಇಲ್ಲದಂತಾಗಿರುವ ಜನರು ನಮ್ಮ ಮನೆಗೆ ಬನ್ನಿ. ನೀವು ನಮ್ಮ ಮನೆಗೆ ಅತಿಥಿಗಳು ಎಂದು ಫೇಸ್ ಬುಕ್ ನಲ್ಲಿ ಮಮ್ಮುಟ್ಟಿ ತಿಳಿಸಿದ್ದಾರೆ.

ಸಿನಿಮಾ ನಟರಿಂದ ಆರ್ಥಿಕ ನೆರವು:
ಕೆಲವು ನಟರು ಆರ್ಥಿಕ ನೆರವು ಘೋಷಿಸಿದ್ದರೆ, ಇನ್ನು ಕೆಲವರು ಆಹಾರ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ 10 ಲಕ್ಷ ರೂಪಾಯಿ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ರಜನಿ ಅಳಿಯ ಧನುಷ್ 5 ಲಕ್ಷ ರೂಪಾಯಿ, ನಟ ಸೂರ್ಯ, ಸಹೋದರ ಕಾರ್ತಿ 25 ಲಕ್ಷ ರೂಪಾಯಿ, ವಿಶಾಲ್ ಕೃಷ್ಣ ರೆಡ್ಡಿ, ರಾಘವ್ ಲಾರೆನ್ಸ್ ತಲಾ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
-ಉದಯವಾಣಿ

Write A Comment