ಹರ್ದೋಯಿ (ಉ.ಪ್ರ.): ಲಗಾನ್ ಚಿತ್ರದಲ್ಲಿ ಭೂಕಂದಾಯ ವಿರುದ್ಧ ಬಂಡಾಯವೆದ್ದಿದ್ದ ಪಾತ್ರ ಮಾಡಿದ್ದ ನಟ ಅಮೀರ್ ಖಾನ್ಗೆ ಸ್ಥಳೀಯ ಆಡಳಿತವು 817.95 ರೂ. ಭೂಕಂದಾಯ ಬಾಕಿ ನೀಡುವಂತೆ ಹೇಳಿದೆ. ಅಮೀರ್ ಖಾನ್ ಕುಟುಂಬ ಅಖೀ¤ಯಾಪುರ್ ಬಳಿ ಪಿತ್ರಾರ್ಜಿತವಾಗಿ ಬಂದ ಕೃಷಿ ಜಮೀನು ಹೊಂದಿದೆ. ಅದರ ಉಸ್ತುವಾರಿ ವಹಿಸಿರುವರಿಗೆ ಕಂದಾಯ ನೀಡುವ ಕುರಿತು ಶಹಾಬಾದ್ನ ಉಪವಿಭಾಗೀಯ ಮ್ಯಾಜಿಸ್ಟ್ರೇಟರು ಈಗ ಪತ್ರ ನೀಡಿದ್ದಾರೆ.
ಪತ್ನಿಗೆ ಮುಂಬೈ ಬಿಡಲು ಹೇಳಿದರೇ ಆಮಿರ್?
ಮುಂಬೈ: ದೇಶ ಬಿಡುವ ಕುರಿತ ಹೇಳಿಕೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಪತ್ನಿ ಕಿರಣ್ ರಾವ್ ಮತ್ತು ಪುತ್ರ ರಾವ್ ಆಜಾದ್ ಖಾನ್ ಅವರಿಗೆ ಕೆಲ ದಿನಗಳ ಕಾಲ ಮನೆ ಬಿಟ್ಟು ತೆರಳುವಂತೆ ನಟ ಅಮೀರ್ ಖಾನ್ ಸೂಚಿಸಿದ್ದಾರೆ ಎನ್ನಲಾಗಿದೆ. ವಿವಾದ ತಣ್ಣಗಾಗುವರೆಗೂ ಮಕ್ಕಳನ್ನು ಕರೆದುಕೊಂಡು ಬೇರೆಡೆಗೆ ತೆರಳುವಂತೆ ಕಿರಣ್ಗೆ ಅಮೀರ್ ಸೂಚಿಸಿದ್ದಾರೆ ಎಂದು ದೈನಿಕವೊಂದು ವರದಿ ಮಾಡಿದೆ. ಆದರೆ, ಇಂಥ ಯಾವುದೇ ಸೂಚನೆಯನ್ನು ಅಮೀರ್ ನೀಡಿಲ್ಲ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.
-ಉದಯವಾಣಿ