ಮನೋರಂಜನೆ

ಜಾಹೀರಾತು ಕ್ಷೇತ್ರಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್ !

Pinterest LinkedIn Tumblr

ravichandran

ಬೆಂಗಳೂರು,ಸೆ.30: ನಟನೆ,ನಿರ್ದೇಶನ,ನಿರ್ಮಾಣ ಹೀಗೆ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೋಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಇದೇ ಮೊದಲ ಭಾರಿಗೆ ಜಾಹೀರಾತು ಕ್ಷೇತ್ರಕ್ಕೂ ಪ್ರವೇಶಿಸಿದ್ದಾರೆ.

ಮೈಸೂರಿನ ಗೋಲ್ಡನ್ ಕ್ಯಾಸಲ್ ಅವರ ಅಪಾರ್ಟ್‍ಮೆಂಟ್ ಮತ್ತು ವಿಲ್ಲಾಗಳನ್ನು ಸಂಪೂರ್ಣ ವಿನ್ಯಾಸಗೊಳಿಸುವ ಜವಬ್ದಾರಿಯನ್ನೂ ಹೊತ್ತಿದ್ದಾರೆ.ಈ ಲುರಿತು ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದ ರವಿಚಂದ್ರನ್, ಮುಂದೆ ಕುಟುಂಭದ ಸದಸ್ಯರು ಜತೆಯಾಗಿ ಬದುಕುವುದಿಲ್ಲ,ಮಕ್ಕಳೂ ಕೂಡ ಮದುವೆಯಾದ ಮೇಲೆ ಬೇರೆ ಬೇರೆಯಾಗಿ ಬಿಡುತ್ತಾರೆ.ಸದಾ ನಮ್ಮ ಜೊತೆಯಲ್ಲಿರುವವರು ಅಕ್ಕ ಪಕ್ಕದ ಮನೆಯವರು ಅವರೊಂದಿಗೆ ಉತ್ತಮ ವಾತಾರಣ ಕಲ್ಪಿಸುವ ಉದ್ದೇಶ ನಮ್ಮದು ಹೀಗಾಗಿ ಮೊದಲ ಬಾರಿಗೆ ಜಾಹೀರಾತು ಲೋಕ ಪ್ರವೇಶಿಸಿದ್ದಾನೆ ಎಂದರು.

ಪ್ರೇಮಲೋಕದ ಕನಸು ಮತ್ತು ಕಲ್ಪನೆಗಳನ್ನು ಒಂದುಗೂಡಿಸಿ ವಿಶಿಷ್ಟ ವಿನ್ಯಾಸದಲ್ಲಿ ವಿಲ್ಲಾಗಳನ್ನು ವಿನ್ಯಾಸ ಮಾಡುವ ಜವಬ್ದಾರಿ ನನ್ನ ಮೇಲಿದೆ ಅದಕ್ಕೆ ಗೋಲ್ಡನ್ ಕ್ಯಾಸಲ್‍ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಕೂಡ ಸಾಥ್ ನೀಡಿದ್ದಾರೆ.ಇತ್ತೀಚೆಗೆ ಹೊಸ ಹೊಸ ಐಡಿಯಾಗಳನ್ನೂ ಯಾರೂ ಸವೀಕರಿಸುವುದಿಲ್ಲ.ಸ್ವೀಕರಿಸುವರು ಬಂದಾಗ ತನ್ನ ಎಲ್ಲಾ ಐಡಿಯಾಗಳನ್ನು ನೀಡುತ್ತೇನೆ ಎಂದು ಹೇಳಿದರು.

ಸಂಸ್ಥೆಯೊಂದಕ್ಕೆ ಮೊದಲ ಬಾರಿಗೆ ರಾಯಭಾರಿಯಾಗಿದ್ದೇನೆ.ಅಂಬಾಸಿಡರ್ ಎಂದಾಕ್ಷಣ ತಟ್ಟನೆ ನೆಪಾಗೋದು ತಂದೆ ಬಳಸುತ್ತಿದ್ದ ಅಂಬಾಸಿಡರ್ ಕಾರು ಮಾತ್ರ.ಜೊತೆಗೆ ನಾನು ಕಾರು ಕಲಿತಿದ್ದೇ ಅದರಲ್ಲಿ ಈಗ ಜಾಹೀರಾತುವೊಂದಕ್ಕೆ ರಾಯಬಾರಿಯಾಗಿದ್ದೇನೆ.ಕಳೆದ 20 ವರ್ಷಗಳ ಹಿಂದೆಯೇ ಅವಕಾಶ ಬಂದಿತ್ತು ನಾನು ಒಪ್ಪಿಕೊಂಡಿರಲಿಲ್ಲ,ಕಿಂಗ್ಸ್ ಕೋರ್ಟ್‍ನಲ್ಲಿ ವೈಟರ್ ಆಗಿದ್ದ ನವೀನ್ ಗೋಲ್ಡನ್ ಕ್ಯಾಸಲ್ ಸಂಸ್ಥೆಗೆ ವ್ಯವಸ್ಥಾಪಕ ನಿರ್ದೇಶಕ ಎಂದಾಗ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಕೆಲಸ ಎಂದು ನಾನು ಅವರೊಂದಿಗೆ ಇದ್ದೇನೆ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.

ನವೀನ್ ಮಾತನಾಡಿ,ಹೊಸ ಮಾದರಿಯ ಟೌನ್‍ಶಿಪ್ ನಿರ್ಮಾಣ ಮಾಡುತ್ತೇವೆ.ರವಿಚಂದ್ರನ್ ನಮ್ಮ ಮೇಲೆ ಇಟ್ಟ ನಂಬಿಕೆಯನ್ನು ಪ್ರಾಣಕೊಟ್ಟಾದರೂ ಉಳಿಸಿಕೊಳ್ಳುತ್ತೇನೆ ಎಂದರು.

ನಿರ್ಮಾಪಕ ಸುಧಾಕರ ಭಂಡಾರಿ,ಆರ್.ಪಿ ರವಿಶಂಕರ್,ಟೈಮ್ಸ್ ಕ್ರಿಯೇಷನ್‍ನ ಹರೀಶ್ ಮತ್ತಿತರರು ಗೋಷ್ಟಿಯಲ್ಲಿದ್ದರು.

Write A Comment