ಮನೋರಂಜನೆ

ಭಾರತ ಕ್ರಿಕೆಟ್‌ ತಂಡ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದಾದರೆ ನಾಯಕನ ಸ್ಥಾನದಿಂದ ಕೆಳಗಿಳಿಯಲು ನಾನು ಸಿದ್ಧ: ಧೋನಿ

Pinterest LinkedIn Tumblr

dhoni

ಮೀರ್‌ಪುರ್‌: ನಾಯಕನ ಸ್ಥಾನದಿಂದ ಕೆಳಗಿಳಿಯುವುದರಿಂದ ಭಾರತ ಕ್ರಿಕೆಟ್‌ ತಂಡ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದಾದರೆ ಅದಕ್ಕೆ ನಾನು ಸಿದ್ಧ ಎಂದು ಬಾಂಗ್ಲಾ ದೇಶದ ಎದುರು ಸರಣಿ ಸೋಲಿನ ನಂತರ ಟೀಕೆಗೆ ಗುರಿಯಾಗಿರುವ ಮಹೇಂದ್ರ ಸಿಂಗ್‌ ಧೋನಿ ಕುಟುಕಿದ್ದಾರೆ.

‘ಭಾರತ ಕ್ರಿಕೆಟ್‌ ತಂಡದ ಎಲ್ಲ ತಪ್ಪಿಗೂ ನಾನೇ ಕಾರಣ. ಎಲ್ಲವೂ ನನ್ನಿಂದಲೇ ಆಗುತ್ತಿದೆ. ಬಾಂಗ್ಲಾದೇಶ ಮಾಧ್ಯಮದವರೂ ನಗುತ್ತಿದ್ದಾರೆ,’ ಎಂದು ಇತಿಹಾಸದಲ್ಲಿ ಮೊದಲ ಬಾರಿಗೆ ಬಾಂಗ್ಲಾ ದೇಶದ ಎದುರು ಸರಣಿ ಸೋಲುಂಡ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಹೇಳಿದ್ದಾರೆ.

ನಾಯಕನ ಸ್ಥಾನದಲ್ಲಿ ಎಷ್ಟು ದಿನ ಮುಂದುವರಿಯುವಿರಿ ಎಂಬ ಅರ್ಥದಲ್ಲಿ ಕೇಳಿದ ಪ್ರಶ್ನೆಗೆ ಧೋನಿ ಈ ರೀತಿ ಟಾಂಗ್ ನೀಡಿದ್ದಾರೆ. ಜತೆಗೆ, ನಾಯಕನಾಗಿ ಮುಂದುವರಿಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

‘ನಿಜವಾಗಿಯೂ ಕ್ರಿಕೆಟ್‌ ಖುಷಿ ನೀಡಿದೆ. ಆಗಾಗ ಈ ಪ್ರಶ್ನೆ ಮೇಲೇಳುತ್ತಿದೆ. ಮಾಧ್ಯಮಗಳಿಗೆ ನಾನೆಂದರೆ ಪ್ರೀತಿ. ನನ್ನನ್ನು ತೆಗೆದುಹಾಕಿದ ನಂತರ ಭಾರತ ಕ್ರಿಕೆಟ್‌ ತಂಡ ಉತ್ತಮ ಪ್ರದರ್ಶನ ನೀಡುವುದಾದರೆ, ಎಲ್ಲ ತಪ್ಪುಗಳಿಗೂ ನಾನೇ ಕಾರಣನಾದರೆ ಖಂಡಿತಾ ಸ್ಥಾನದಿಂದ ಕೆಳಗಿಳಿದು, ಆಡುತ್ತೇನೆ,’ ಎಂದು ಹೇಳಿದ್ದಾರೆ.

‘ನಾಯಕ ಯಾರು ಎಂಬುದು ದೊಡ್ಡ ಪ್ರಶ್ನೆಯೇ ಅಲ್ಲ. ನಾನು ನಾಯಕ ಸ್ಥಾನದ ಆಕಾಂಕ್ಷಿಯೇ ಆಗಿರಲಿಲ್ಲ. ಅದು ನನಗೆ ಒಂದು ಕೆಲಸ ಅಥವಾ ಜವಾಬ್ದಾರಿ ಅಷ್ಟೇ. ಅದನ್ನು ವಾಪಸ್‌ ಪಡೆಯುವುದಾದರೆ ಸಂತೋಷ,’ ಎಂದಿದ್ದಾರೆ.

Write A Comment