ಮನೋರಂಜನೆ

ಬಾಂಗ್ಲಾ ವಿರುದ್ದದ ಸೋಲಿಗೆ ರೈನಾ ಹೇಳಿದ್ದೇನು ಗೊತ್ತಾ …?

Pinterest LinkedIn Tumblr

2067Suresh-Raina-ICC-Cricket-World-Cup-2015

ಬಾಂಗ್ಲಾ ವಿರುದ್ದ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ತಮ್ಮ ಪ್ರತಿಕ್ರಿಯೆ ನೀಡಿರುವ ಭಾರತೀಯ ತಂಡದ ಬ್ಯಾಟ್ಸ್ ಮನ್ ಸುರೇಶ್ ರೈನಾ ನಾವು ಇಂದು ಸೋತಿರಬಹುದು ಆದರೆ ಮುಂದೆ ಗೆದ್ದೇ ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದಲ್ಲಿ 79 ರನ್ ಸೋಲಿನಿಂದ ತಂಡಕ್ಕೆ ನೋವಾಗಿದ್ದು ಆದರೆ ಪುನಃ ಪುಟಿದೆದ್ದು ಪ್ರತಿಏಟು ನೀಡುವ ಮೂಲಕ ನಮ್ಮ ಮೇಲಿನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಾಂಗ್ಲಾ ಆಟಗಾರರು ಎಲ್ಲರೀತಿಯಲ್ಲಿಯೂ ಸಮರ್ಥವಾಗಿ ಎದುರಿಸುವ ಮೂಲಕ ನಮ್ಮನ್ನು ಗೆಲ್ಲಲು ಸಫಲರಾದರು. ಅಲ್ಲದೇ ಮುಸ್ತಫಿಜುರ್ ಕಬಳಿಸಿದ ಎಲ್ಲಾ ಐದು ವಿಕೆಟ್‌ಗಳು ನಿಧಾನಗತಿಯ ಎಸೆತದಿಂದ ಬಂದಿದ್ದು, ರೋಹಿತ್ ಬಳಿಕ ನಾನು ರವೀಂದ್ರ ಜಡೇಜಾ ಮತ್ತು ನಾನು ಬ್ಯಾಟಿಂಗ್ ಮಾಡುವಾಗ ಇನ್ನೂ ಐದು ಓವರುಗಳನ್ನು ಆಡಿದ್ದರೆ, ನಾವು ಗೆಲ್ಲುತ್ತಿದ್ದೆವು ಎಂದು ರೈನಾ ತಿಳಿಸಿದ್ದಾರೆ.

ಆದರೆ ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ನಾವು ಗೆಲ್ಲಲು ನಮ್ಮ ಎಲ್ಲಾ ಶಕ್ತಿಯನ್ನು ಪ್ರಯೋಗಿಸುವ ಅಗತ್ಯವಿದೆ. ಯಾವಾಗಲೂ ಒಂದು ಸೋಲು ನಮ್ಮನ್ನು ಕೆಟ್ಟ ತಂಡವಾಗಿ ಮಾಡುವುದಿಲ್ಲ.ಅಲ್ಲದೇ ನಾವು ಹೀಗೆ  ಕಮ್ ಬ್ಯಾಕ್ ಆಗುತ್ತೇವೆ ಎನ್ನುವುದು ನಮ್ಮ ತಂಡದ ಗುಣ ತೋರಿಸುತ್ತದೆ ಎಂದು ರೈನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Write A Comment