ಮುಂಬಯಿ: ಮುಂಬಯಿ ಹೊರವಲಯದ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿರುವ ಬಾಲಿವುಡ್ನ ಮೊದಲ ಸೂಪರ್ಸ್ಟಾರ್ ರಾಜೇಶ್ ಖನ್ನ ಅವರ “ಆಶೀರ್ವಾದ’ ಬಂಗ್ಲೆಯನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಖರೀದಿಸಿದ್ದ ಮಂಗಳೂರಿನ ಶಶಿ ಕಿರಣ್ ಶೆಟ್ಟಿ ಅವರು ಕೆಡಹಿ 6,500 ಚದರಡಿ ಸ್ಥಳಾವಕಾಶದ ಆ ನಿವೇಶನದಲ್ಲಿ ಮೂರು ಅಥವಾ ನಾಲ್ಕು ಮಹಡಿಗಳ ಕಟ್ಟಡವೊಂದನ್ನು ನಿರ್ಮಿಸಲಿದ್ದಾರೆ.
“ಆಶೀರ್ವಾದ’ ಬಂಗ್ಲೆಯು ಈಗಾಗಲೇ 50 ವರ್ಷಗಳಷ್ಟು ಹಳೆಯ ಕಟ್ಟಡವಾಗಿದ್ದು ನಾವೀಗ ಅದನ್ನು ಕೆಡಹಿ ಹೊಸ ಕಟ್ಟಡ ನಿರ್ಮಿಸುವ ಯೋಜನೆ ಹೊಂದಿದ್ದೇವೆ. ಮುಂದಿನ ಎರಡು – ಮೂರು ತಿಂಗಳಲ್ಲಿ ಈ ಕೆಲಸವು ಆರಂಭವಾಗಲಿದೆ’ ಎಂದು ಅವಶ್ಯ ಗ್ರೂಪ್ನ ಭಾಗವಾಗಿರುವ ಆಲ್ಕಾರ್ಗೋ ಲಾಜಿಸ್ಟಿಕ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಶಶಿ ಕಿರಣ್ ಶೆಟ್ಟಿ ತಿಳಿಸಿದ್ದಾರೆ.
-ಉದಯವಾಣಿ