ಬೆಂಗಳೂರು, ಜೂ.10:ದನ ಕಾಯುವವನು ಚಿತ್ರ ಶೀರ್ಷಿಕೆಯನ್ನು ಅನುಮತಿ ಪಡೆಯದೆ ಬಳಸಿಕೊಳ್ಳಲಾಗುತ್ತಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.
ಸಲೀವುಲ್ಲಾಖಾನ್ ಎಂಬುವವರು ಕಳೆದ 2014ರಲ್ಲೇ ಈ ಹೆಸರಿನಲ್ಲಿ ಚಿತ್ರ ನಿರ್ಮಿಸುತ್ತಿರುವ ಬಗ್ಗೆ ಟೈಟಲ್ ನೋಂದಣಿ ಮಾಡಿದ್ರು. ಆದರೆ ಈಗ ಅದನ್ನು ದುನಿಯಾ ವಿಜಿ ನಟನೆಯ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಯಾವುದೇ ಅನುಮತಿ ಪಡೆಯದೆ ಚಿತ್ರ ಶೀರ್ಷಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಮತ್ತೆ ಸ್ಯಾಂಡಲ್ವುಡ್ನಲ್ಲಿ ಚಿತ್ರ ಶೀರ್ಷಿಕೆ ವಿವಾದ ಶುರುವಾಗಿದೆ.