ನವದೆಹಲಿ: ಬಾಲಿವುಡ್ ನ ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಕಾನೂನೂ ಹೋರಾಟ ನಡೆಸಬೇಕಿದೆ. ಅವರ ಪ್ರಸಿದ್ಧ ಟಿವಿ ಶೋ ಆದ ಸತ್ಯಮೇವ ಜಯತೇಯಲ್ಲಿ ಭಾರತದ ಲಾಂಛನ ಬಳಸಿದ್ದನ್ನು ಪ್ರಶ್ನಿಸಿ ಅವರ ವಿರುದ್ಧ ಮನೋರಂಜನ್ ರಾಯ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ವಕೀಲರ ಮುಖಾಂತರ ನೊಟೀಸ್ ಕಳುಹಿಸಿದ್ದಾರೆ.
ನೋಟೀಸ್ ನಲ್ಲಿ, ಆಮೀರ್ ಖಾನ್ ತಮ್ಮ ಶೋನಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಹೇಗೆ ರಾಷ್ಟ್ರದ ಲಾಂಛನವನ್ನು ಬಳಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮದ ನಿರ್ಮಾಪಕರು, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದರೆ ಅದನ್ನು ನ್ಯಾಯಾಲಯಕ್ಕೆ ಒದಗಿಸುವಂತೆ, ಇಲ್ಲದಿದ್ದರೆ ಕಾನೂನು ಹೋರಾಟಕ್ಕೆ ಸಜ್ಜಾಗುವಂತೆಯೂ ಎಚ್ಚರಿಕೆ ನೀಡಿದ್ದಾರೆ.