ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಭೂ ವಿವಾದ ಸುತ್ತಿಕೊಂಡಿದ್ದು 15 ದಿನದೊಳಗೆ ಉತ್ತರ ನೀಡುವಂತೆ ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ನೋಟೀಸ್ ನೀಡಿದೆ.
ಭಾರತದ ತಂಡದ ನಾಯಕ ಧೋನಿಗೆ 2006ರಲ್ಲಿ ನಿವೇಶನವೊಂದನ್ನು ಸರ್ಕಾರ ನೀಡಿತ್ತು. ಆದರೆ ನಂತರದಲ್ಲಿ ಅವರಿಗೆ ಅದರ ಪಕ್ಕದಲ್ಲಿ ಈಗಾಗಲೇ ಹಂಚಿಕೆಯಾಗಿದ್ದ ಮತ್ತೊಂದು ನಿವೇಶನವನ್ನು ನೀಡಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆಯೂ ರಾಂಚಿಯ ಹರ್ವಿು ಹೌಸಿಂಗ್ ಕಾಲನಿಯ ವಿಷಯಕ್ಕೆ ಸಂಬಂಧಿಸಿದಂತೆ ಧೋನಿ ಸುದ್ದಿಯಾಗಿದ್ದರು . ಆದರೆ ಇದೀಗ ನಿವೇಶನ ಹಂಚಿಕೆ ಗೊಂದಲಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ನೋಟಿಸ್ ಜಾರಿಮಾಡಿದ್ದು ಹದಿನೈದು ದಿನದೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.