ಮನೋರಂಜನೆ

ಗಾಂಧಿನಗರದ ನಿರ್ಮಾಪಕ: ಮತ್ತೆ ಬಣ್ಣ ಹಚ್ಚಿದ ಬಣಕರ್

Pinterest LinkedIn Tumblr

banakar

ಸಿನಿಮಾ ಗೆದ್ದರೂ ಕೆಲ ನಾಯಕ ನಟರಿಗೆ ಸಿನಿಮಾಗಳೆ ಇಲ್ಲ. ಇನ್ನೂ ಕೆಲ ನಟರಿಗೆ ನಾಯಕನಾಗುವ ಅರ್ಹತೆಗಳಿದ್ದರೂ ಆ ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಿರುವಾಗ ಗಾಂಧಿನಗರದ ನಿರ್ಮಾಪಕರಲ್ಲೊಬ್ಬರಾದ ಉಮೇಶ್ ಬಣಕಾರ್ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ಮತ್ತೊಂದು ಸಿನಿಮಾದಲ್ಲಿ ಹೀರೋ ಆಗಿದ್ದಾರೆ.

ಬಣ್ಣದ ಬಾಂಬ್‌ಗಳನ್ನ ಸಿಡಿಸಿ ಮೆಜೆಸ್ಟಿಕ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಗಿತ್ತು. ಅದಾದಮೇಲೆ ಮೆಜೆಸ್ಟಿಕ್ ಎಕ್ಸ್‌ಪ್ರೆಸ್ ಮಂದಗತಿಯಲ್ಲಿ ಚಿತ್ರೀಕರಣವಾಗುತ್ತಿದೆ. ಆ ಚಿತ್ರ ಯಾವಾಗ ಪ್ರೇಕ್ಷಕರು ನೋಡುತ್ತಾರೋ ಗೊತ್ತಿಲ್ಲ. ಆಗಲೇ ಮಧುಸೂಧನ್ ರಾವ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಉಮೇಶ್ ಹೀರೋ ಆಗಿದ್ದಾರೆ.

ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಮೇಯ್ನ್ ಥಿಯೇಟರ್ ಪ್ರಾಬ್ಲಂ ಆದ್ರೆ ಮತ್ತೊಂದು ಕಡೆ ಸೆಟಲೈಟ್ ರೈಟ್ಸ್‌ಗೆ ಸಿನಿಮಾಗಳು ಸೇಲಾಗದೇ ಇರುವ ಪ್ರಾಬ್ಲಂ ಇದೆ. ಹೀಗಿರುವಾಗ ಬಣಕರ್ ಅವರ ಈ ಎರಡೂ ಸಿನಿಮಾಗಳು ರಿಲೀಸ್ ಆಗುತ್ತವಾ? ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Write A Comment