ಮನೋರಂಜನೆ

ಸ್ಯಾಂಡಲ್‌ವುಡ್‌ಗೆ ಖಳನಟ ರವಿಶಂಕರ್ ಪುತ್ರ ಅದ್ವೈತ

Pinterest LinkedIn Tumblr

ravi

ಖಳನಟ ರವಿಶಂಕರ್ ಪುತ್ರ ಅದ್ವೈತ, ಸ್ಯಾಂಡಲ್‌ವುಡ್ ಮೂಲಕ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಇಂಥದ್ದೊಂದು ಖುಷಿ ಸುದ್ದಿಯನ್ನು ಸ್ವತಃ ರವಿಶಂಕರ್ ನೀಡಿದ್ದಾರೆ.

‘ನನ್ನ ಇಬ್ಬರು ಸಹೋದರರು ಕನ್ನಡ ಸಿನಿಮಾರಂಗದ ಮೂಲಕ ಸಾಕಷ್ಟು ಹೆಸರು ಮಾಡಿದವರು. ಅಲ್ಲದೇ ನಾನೂ ಕೂಡ ಇದೇ ಸಿನಿಮಾರಂಗದಲ್ಲಿ ಬಿಝಿ ಆಗಿದ್ದೇನೆ. ನನ್ನ ಮಗ ಅದ್ವೈತ ಸ್ಯಾಂಡಲ್‌ವುಡ್ ಮೂಲಕವೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಬೇಕು ಎನ್ನುವುದು ನನ್ನ ಆಸೆ. ಅತೀ ಶೀಘ್ರದಲ್ಲಿ ಆ ಕೆಲಸ ಆಗಲಿದೆ’ ಅಂದಿದ್ದಾರೆ ರವಿಶಂಕರ್.

ಅಂದಹಾಗೆ ರವಿಶಂಕರ್, ನಟ ಸಾಯಿಕುಮಾರ್ ಸಹೋದರ. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಾಯಿಕುಮಾರ್ ನಾಯಕ. ಅಲ್ಲದೇ ಮತ್ತೋರ್ವ ಸಹೋದರ ಅಯ್ಯಪ್ಪ ಶರ್ಮಾ ಕೂಡ ನಿರ್ದೇಶಕರಾಗಿ ಕನ್ನಡಕ್ಕೆ ಪರಿಚಯ. ಈ ಕುಟುಂಬದ ಮತ್ತೊಂದು ಕುಡಿ ಕನ್ನಡ ಸಿನಿಮಾರಂಗಕ್ಕೆ ಬರುತ್ತಿರುವುದು ವಿಶೇಷ.

ಸಿನಿಮಾಗೆ ಸಂಬಂಧಿಸಿದ ತರಬೇತಿಯನ್ನು ಅದ್ವೈತ ಪಡೆಯುತ್ತಿದ್ದಾರೆ. ಅಲ್ಲದೇ ಸಿನಿಮಾ ಹಿನ್ನೆಲೆಯೂ ಇವರಿಗೆ ಇರುವುದರಿಂದ ಸಿನಿಮಾರಂಗದ ಪ್ರವೇಶ ಸಲೀಸಾಗಲಿದೆ. ದೊಡ್ಡಪ್ಪ ಸಾಯಿಕುಮಾರ್ ಪೊಲೀಸ್ ಪಾತ್ರಗಳ ಮೂಲಕವೇ ಫೇಮಸ್ ಆದವರು. ತಂದೆ ರವಿಶಂಕರ್ ಖಳನಟ. ಇವರಿಗಿಂತ ಭಿನ್ನವಾದ ಪಾತ್ರಗಳಲ್ಲಿ ಅದ್ವೈತ ಕಾಣಿಸಿಕೊಳ್ಳುತ್ತಾರಂತೆ.

Write A Comment