
ಮುಂಬೈ: ಬಾಲಿವುಡ್ ನಟ, ಗಾಯಕ ಆಯುಷ್ಮಾನ್ ಖುರಾನಾ ಅವರ ಪತ್ನಿ ಲೇಖಕಿ ತಾಹಿರಾ ಕಶ್ಯಪ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಫೋಟೋವೊಂದರಿಂದ ತೀವ್ರ ಟ್ರೋಲ್ಗೆ ಒಳಗಾಗಿ ಬಳಿಕ ಅದನ್ನು ಡಿಲೀಟ್ ಮಾಡಿ, ಕ್ಷಮೆ ಕೇಳಿದ್ದಾರೆ.
ತಾಹೀರಾ ಕಶ್ಯಪ್ ಅವರು ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಗೆದ್ದವರು. ಸದ್ಯ ಪುಣೆಯ ರೆಸಾರ್ಟ್ವೊಂದರಲ್ಲಿ ತಮ್ಮ ಮಕ್ಕಳು, ಸ್ನೇಹಿತರು, ಅವರ ಮಕ್ಕಳೊಂದಿಗೆ ಜಾಲಿ ಮೂಡ್ನಲ್ಲಿದ್ದಾರೆ. ಈ ಮಧ್ಯೆ ಮಂಗಳವಾರ ತಾಹಿರಾ ತಾವು ಬುದ್ಧನ ಪುತ್ಥಳಿಯ ಮೇಲೆ ಕುಳಿತಿದ್ದ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.
ಈ ಚಿತ್ರ ವಿಪರೀತ ಟ್ರೋಲ್ ಆಗಿದ್ದಲ್ಲದೆ, ಹಲವರು ಟೀಕಿಸಿದ್ದರು. ಬುದ್ಧನ ಕೈಮೇಲೆ ಮೇಲೆ ಕುಳಿತಿದ್ದು ಸರಿಯಲ್ಲ ಎಂಬಂಥ ಹಲವು ಕಾಮೆಂಟ್ಗಳು, ಜತೆಗೆ ಆಕ್ರೋಶವೂ ವ್ಯಕ್ತವಾಗಿತ್ತು. ಅದಾದ ಬಳಿಕ ಆ ಫೋಟೋವನ್ನು ತಾಹಿರಾ ಡಿಲೀಟ್ ಮಾಡಿದ್ದರು.
ಬುಧವಾರ ಕ್ಷಮಾಪಣಾ ಪೋಸ್ಟ್ ಹಾಕಿದ್ದು, ನಾನು ಯಾರಿಗೂ ನೋವು ಕೊಡಲು ಇಷ್ಟಪಡುವುದಿಲ್ಲ. ನಾನು ಅಪ್ಲೋಡ್ ಮಾಡಿದ ಫೋಟೋದಿಂದ ಕೆಲ ಜನರ ಭಾವನೆಗೆ ಧಕ್ಕೆಯಾಗಿದ್ದು, ಅವರೆಲ್ಲರ ಕ್ಷಮೆ ಕೇಳುತ್ತೇನೆ. ಎಲ್ಲರೂ ಶಾಂತಿಯಿಂದ, ಪ್ರೀತಿಯಿಂದ ಇರಬೇಕು ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.
ಅಲ್ಲದೆ, ತಾವು ಮಕ್ಕಳೊಂದಿಗೆ ರೆಸ್ಟೋರೆಂಟ್ನಲ್ಲಿ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Comments are closed.