ಮುಂಬೈ

ಮಹಾ ರೈತ ಪಾದಯಾತ್ರೆ: ಬಹುತೇಕ ಬೇಡಿಕೆ ಈಡೇರಿಕೆಗೆ ಒಪ್ಪಿದ ಫಡ್ನವಿಸ್‌

Pinterest LinkedIn Tumblr


ಮುಂಬಯಿ: ಕಳೆದ ಎರಡು ದಿನಗಳ ನಡೆದ ಮಹಾರಾಷ್ಟ್ರ ರೈತರ ಬೃಹತ್‌ ರೈತಯಾತ್ರೆ ಕೊನೆಗೂ ಯಶಸ್ಸು ಕಂಡಿದೆ. ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮಹಾರಾಷ್ಟ್ರ ಸರಕಾರ ಒಪ್ಪಿಗೆ ನೀಡಿದೆ.

ರೈತರ ಬೃಹತ್‌ ಸಮಾವೇಶಕ್ಕೆ ಬೆದರಿಕೆ ರಾಜ್ಯ ಸರಕಾರ ಕೊನೆಗೂ ಕೆಲವು ಪ್ರಮಖ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದೆ.

ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರೇ ಮಾಹಿತಿ ನೀಡಿದ್ದಾರೆ.

ರೈತರ ಎಲ್ಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಾಗುವುದು. ಈ ಸಂಬಂಧ ಲಿಖಿತ ಪತ್ರವನ್ನು ನೀಡಲಾಗುವುದು ಎಂದು ದೇವೇಂದ್ರ ಫಡ್ನವಿಸ್‌ ತಿಳಿಸಿದ್ದಾರೆ.

ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾತ್‌ ಪಾಟೀಲ್‌ ಆಜಾದ್‌ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಸಂದೇಶವನ್ನು ಓದಿದರು.

ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ಒಪ್ಪಿದ ಹಿನ್ನೆಲೆಯಲ್ಲಿ ರೈತರ ತಮ್ಮ ಬೃಹತ್‌ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

Comments are closed.