ಮನೋರಂಜನೆ

ಶ್ರೀದೇವಿ ಚಿತಾಭಸ್ಮ ಬಂಗಾಳ ಕೊಲ್ಲಿಯಲ್ಲಿ ವಿಸರ್ಜನೆ

Pinterest LinkedIn Tumblr


ಚೆನ್ನೈ: ದಿವಂಗತ ಬಾಲಿವುಡ್‌ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಚೆನ್ನೈನ ಇಂಜಂಬಾಕ್ಕಂ ಕರಾವಳಿ ಸಮೀಪ ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ವಿಸರ್ಜಿಸಲಾಯಿತು. ಶ್ರೀದೇವಿ ಅವರ ಪತಿ ಬೋನಿ ಕಪೂರ್ ಮತ್ತು ಪುತ್ರಿಯರಾದ ಜಾಹ್ನವಿ ಮತ್ತು ಖುಷಿ ಈ ಕ್ರಿಯೆಯನ್ನು ನೆರವೇರಿಸಿದರು.

54 ವರ್ಷ ವಯಸ್ಸಿನ ಶ್ರೀದೇವಿ ಅವರು ಫೆಬ್ರವರಿ 24ರಂದು ದುಬೈನಲ್ಲಿ ನಿಧನರಾಗಿದ್ದರು. ಬುಧವಾರದಂದು ಮುಂಬಯಿನಲ್ಲಿ ಅವರ ಅಂತ್ಯಕ್ರಿಯೆ ನಡೆದಿತ್ತು.

ಶುಕ್ರವಾರ ಕಪೂರ್ ಕುಟುಂಬ ಅರ್ಚಕರೊಬ್ಬರ ಜತೆಗೆ ಸಮುದ್ರ ತೀರಕ್ಕೆ ತೆರಳಿ ಅಸ್ಥಿ ವಿಸರ್ಜನೆ ನೆರವೇರಿಸಿತು. ಬಳಿಕ ಖಾಸಗಿ ವಿಮಾನದಲ್ಲಿ ಮುಂಬಯಿಗೆ ವಾಪಸಾಯಿತು ಎಂದು ಚೆನ್ನೈ ಪೊಲೀಸ್ ಮೂಲಗಳು ತಿಳಿಸಿವೆ.

Comments are closed.