ಮುಂಬೈ

ಬಾಳ್‌ ಠಾಕ್ರೆಗೆ ಉದ್ಭವ್‌ ಟಾರ್ಚರ್‌ ಕೊಡುತ್ತಿದ್ದರು; ರಾಣೆ ಕಿಡಿ

Pinterest LinkedIn Tumblr


ಸಾಂಗ್ಲಿ: ಬಾಯ್ಮುಚ್ಚಿಕೊಂಡಿರಿ , ಇಲ್ಲವಾದಲ್ಲಿ ಎಲ್ಲಾ ರಹಸ್ಯಗಳನ್ನು ಬಯಲು ಮಾಡುತ್ತೇನೆ. ಇದು ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ ಅವರು ಶನಿವಾರ ಶಿವಸೇನೆ ಅಧ್ಯಕ್ಷ ಉದ್ಭವ್‌ ಠಾಕ್ರೆ ಅವರಿಗೆ ನೀಡಿದ ಎಚ್ಚರಿಕೆ.

ತಾನು ಶಿವಸೇನೆಯಲ್ಲಿದ್ದಾಗ ಬಾಳ್‌ ಠಾಕ್ರೆ ಅವರಿಗೆ ಕಿರುಕುಳ ನೀಡುತ್ತಿದ್ದೆ ಎಂಬ ಆರೋಪವನ್ನು ಅಲ್ಲಗಳೆದ ರಾಣೆ ನಾನು ನನ್ನ ಕಣ್ಣಾರೆ ನೋಡಿದ್ದೇನೆ ಹೇಗೆ ಉದ್‌ಭವ್‌ ಮತ್ತು ಕುಟುಂಬ ಬಾಳ್‌ ಠಾಕ್ರೆ ಅವರಿಗೆ ಕಿರುಕುಳ ನೀಡಿದೆ ಎಂದು.ನಾನು ಅದನ್ನು ಬಹಿರಂಗ ಪಡಿಸಲು ಹಿಂಜರಿಯುವುದಿಲ್ಲ ಎಂದು ಕಿಡಿ ಕಾರಿದರು.

ಬಾಳಾ ಸಾಹೇಬ್‌ ಅವರು ಬದುಕಿದ್ದಾಗ ನಾನು ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟಿಲ್ಲ.ಎಲ್ಲಾ ಕಿರುಕುಳಗಳನ್ನು ಅವರ ಮನೆಯಲ್ಲೇ ಅನುಭವಿಸಿದ್ದರು.ನಾನು ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದರು.

ರಾಣೆ ಅವರನ್ನು ಮುಖ್ಯಮಂತ್ರಿ ಫ‌ಡ್ನವೀಸ್‌ ಅವರು ಸಂಪುಟಕ್ಕೆ ಸೇರ್ಪಡೆಗೊಳಿದ್ದೆ ಆದರೆ ಮೈತ್ರಿ ಕಡಿದುಕೊಳ್ಳುವುದಾಗಿ ಶಿವಸೇನೆ ಬೆದರಿಕೆ ಹಾಕಿತ್ತು.

ಸಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ ಪಕ್ಷ ತೊರೆದಿದ್ದ ರಾಣೆ ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷ ಹುಟ್ಟು ಹಾಕಿದ್ದರು.

-ಉದಯವಾಣಿ

Comments are closed.