ಮುಂಬೈ

ನೋಟು ನಿಷೇಧದ ಬಾಂಬ್ ಹಾಕಿ ಹಿರೋಶಿಮಾ, ನಾಗಸಾಕಿ ಮಾಡಿದ್ದಾರೆ

Pinterest LinkedIn Tumblr


ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದತಿ ಬಾಂಬ್ ಹಾಕಿ ಭಾರತವನ್ನು ಹಿರೋಶಿಮಾ, ನಾಗಸಾಕಿಯಂತೆ ಮಾಡಿದ್ದಾರೆ ಎಂದು ಶಿವಸೇನೆ ಹೇಳಿದೆ.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶಿವಸೇನೆ ಸದಾ ಟೀಕಿಸುತ್ತಲೇ ಬಂದಿದೆ.

ಶಿವಸೇನೆ ತಮ್ಮ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಮೋದಿ ವಿರುದ್ಧ ಟೀಕೆ ಮಾಡಿದ್ದು, ಮೋದಿಯವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಮಾತನ್ನೂ ಮೋದಿ ಕೇಳುತ್ತಿಲ್ಲ ಎಂದು ಬರೆಯಲಾಗಿದೆ.

ತಮ್ಮ ಸಚಿವ ಸಂಪುಟದಲ್ಲಿ ಏನೂ ಮಾತನಾಡದೇ ಇರುವ ಗಿಣಿಯಂತಿರುವವರನ್ನೇ ಮೋದಿ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್‍ ನ್ನು ಕೂಡಾ ಅವರೇ ಆಯ್ಕೆ ಮಾಡಿದ್ದು, ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಅದೇ ವೇಳೆ ರದ್ದು ಮಾಡಲಾದ ನೋಟುಗಳನ್ನು ಸಹಕಾರಿ ಬ್ಯಾಂಕ್‌ಗಳಲ್ಲಿ ಸ್ವೀಕರಿಸಲು ಮೋದಿ ಸರ್ಕಾರ ಅನುಮತಿ ನೀಡಿಲ್ಲ, ಈ ನಿರ್ಧಾರದಿಂದಾಗಿ ರೈತರಿಗೆ ಹೆಚ್ಚು ಸಮಸ್ಯೆಯುಂಟಾಗಿದೆ ಎಂದು ಶಿವಸೇನೆ ಹೇಳಿದೆ.

Comments are closed.