ಮುಂಬೈ

ದೇವಮಾನವನ ವಶದಿಂದ 28 ಮಂದಿಯನ್ನು ರಕ್ಷಿಸಿದ ಪೊಲೀಸರು

Pinterest LinkedIn Tumblr

policeಮುಂಬೈ: ಮುಂಬೈನ ಕಾಂದಿವಲಿ ಉಪನಗರದಲ್ಲಿ ಸ್ವಯಂಘೋಷಿತ ಮಾನವನ ವಶದಲ್ಲಿದ್ದ 12 ಅಪ್ರಾಪ್ತರು ಸೇರಿದಂತೆ 28 ಮಂದಿಯನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ.

ತನ್ನ ವಶದಲ್ಲಿರಿಸಿಕೊಂಡಿದ್ದ ಮಕ್ಕಳಲ್ಲಿ ಅಲ್ಲಿನ ಕ್ರಿಯಾ ವಿಧಾನಗಳನ್ನು ಮಾಡಲು ಒತ್ತಾಯಿಸುತ್ತಿದ್ದ ಈ ದೇವಮಾನವ, ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ತೊಂದರೆಯನ್ನು ನೀಡುತ್ತಿದ್ದರು ಎನ್ನಲಾಗುತ್ತಿದೆ.

ಆತನ ವಶದಲ್ಲಿದ್ದ ಒಬ್ಬರು ವ್ಯಕ್ತಿ ಈ ಬಗ್ಗೆ ಆಪ್ತರೊಬ್ಬರಲ್ಲಿ ಹೇಳಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಸಮ್ತಾ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸುನೈನಾ ನಾತೆ ಹೇಳಿದ್ದಾರೆ.

ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಶುಕ್ರವಾರ ದೇವಮಾನವನ ಬಂಗ್ಲೆಗೆ ದಾಳಿ ಮಾಡಿದ್ದು, ಅಲ್ಲಿ ಬಂಧಿತರಾಗಿದ್ದ ಜನರನ್ನು ರಕ್ಷಿಸಿದ್ದಾರೆ. ಅಲ್ಲಿದ್ದವರಲ್ಲಿ ಹೆಚ್ಚಿನವರು ಉತ್ತರಪ್ರದೇಶದವರಾಗಿದ್ದಾರೆ ಎಂದು ನಾತೆ ಹೇಳಿದ್ದಾರೆ

Comments are closed.