ಮುಂಬೈ

ಒಕ್ಕಲಿಗರ ಸಾಧನೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ:  ಅಂಬರೀಶ್

Pinterest LinkedIn Tumblr

Okkaliga Mumbai_ Feb 3- 2015_001

ಮುಂಬಯಿ : ಒಕ್ಕಲಿಗರ ಸಂಘ ಮಹಾರಾಷ್ಟ್ರದ ವತಿಯಿಂದ ಒಕ್ಕಲಿಗರ ಮಹೋತ್ಸವವು ಫೆ. 1 ರಂದು ನವಿಮುಂಬಯಿ ನೆರುಳ್ ನ ಸಂಸ್ಕೃತಿ ಭವನದಲ್ಲಿ ಸಂಘದ ಅಧ್ಯಕ್ಷ ರಂಗಪ್ಪ ಸಿ. ಗೌಡರ ಅಧ್ಯಕ್ಷತೆಯಲ್ಲಿ ಜರಗಿತು.

ರಕ್ತದಾನ, ಹಳದಿ ಕುಂಕುಮ, ರಂಗೋಲಿ ಸ್ಪರ್ಧೆಯು ನಡೆಯಿತು. ’ಡ್ಯಾನ್ಸ್ ಒಕ್ಕಲಿಗ ಡ್ಯಾನ್ಸ್’ ನೃತ್ಯ ಕಾರ್ಯಕ್ರಮ ಹಾಗೂ ಸೌಂದರ್ಯ ಸ್ಪರ್ಧೆಯು ವಿಶೇಷ ಆಕರ್ಷಣೆಯಾಗಿತ್ತು.

Okkaliga Mumbai_ Feb 3- 2015_002

Okkaliga Mumbai_ Feb 3- 2015_003

Okkaliga Mumbai_ Feb 3- 2015_004

Okkaliga Mumbai_ Feb 3- 2015_005

Okkaliga Mumbai_ Feb 3- 2015_006

Okkaliga Mumbai_ Feb 3- 2015_007

Okkaliga Mumbai_ Feb 3- 2015_008

Okkaliga Mumbai_ Feb 3- 2015_009

Okkaliga Mumbai_ Feb 3- 2015_010

Okkaliga Mumbai_ Feb 3- 2015_011

ವಿಶೇಷ ಅತಿಥಿಯಾಗಿ ಖ್ಯಾತ ನಟ, ಮಂಡ್ಯದ ಗಂಡು ಅಂಬರೀಷ್ ಆಗಮಿಸಿದ್ದು ಮುಂಬಯಿಯಲ್ಲಿ ಒಕ್ಕಲಿಗರು ಸಂಘಟನೆಯ ಮೂಲಕ ಒಗ್ಗೂಡಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಒಕ್ಕಲಿಗರ ಸಾಧನೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ, ಒಕ್ಕಲಿಗರ ಸಾಧನೆ ಅಭಿನಂದನೀಯ ಎಂದು ಅಭಿಮಾನಿಗಳ ಕರತಾಡನೆಯ ಮಧ್ಯೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ. ಸುವರ್ಣ, ಶಾಸಕ ನಾರಾಯಣ ಗೌಡರನ್ನು ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ಕೆ. ರಾಜೇಗೌಡ ಎಲ್ಲರನ್ನು ಸ್ವಾಗತಿಸಿದರು.

ಬೆಂಗಳೂರಿನ ಶ್ರೀನಿವಾಸ್, ಭಾನುಮತಿ ಮತ್ತು ಅಮೃತಾ ಎಂ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಸಂಘಟನೆಗಳ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉದ್ಯಮಿ ನಾರಾಯಣ ಗೌಡ, ಮಂದಾತಾಯಿ ಮ್ಹ್ಯಾತ್ರೆ, ಖ್ಯಾತ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ನಗರ ಸೇವಕ ಸಂತೋಷ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

Write A Comment