ಮುಂಬೈ: 14ದಿನ ಪೆರೋಲ್ ರಜೆ ಮುಗಿಸಿ ಗುರುವಾರ ಜೈಲಿಗೆ ಹೋದ ನಟ ಸಂಜಯ್ ದತ್ ಮರಳಿ ಮನೆಗೆ ತೆರಳಿದ ಘಟನೆ ನಡೆದಿದೆ.
ಪೆರೋಲ್ ವಿಸ್ತರಿಸಬೇಕೆಂದು ಕೋರಿ ಸಂಜಯ್ ದತ್ ಸಲ್ಲಿಸಿದ ಅರ್ಜಿ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಶರಣಾಗುವ ಅಗತ್ಯವಿಲ್ಲ ಎಂದು ಸಂಬಂಧಿಸಿದ ಸಚಿವರು ಹೇಳಿದ್ದಾಗಿ ವಕೀಲರು ತಿಳಿಸಿದರು.
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ದತ್ ಶುಕ್ರವಾರ ಜೈಲಿಗೆ ತೆರಳುವ ಸಂಭವವಿದೆ.