ಮುಂಬೈ

ಬಿಲ್ಲವರ ಅಸೋಷಿಯೇಶನ್ ನ ಬೋರಿವಲಿ ಸ್ಥಳೀಯ ಕಚೇರಿಯಲ್ಲಿ ನಾರಾಯಣ ಗುರುಗಳ 160ನೇ ಜಯಂತಿ ಆಚರಣೆ

Pinterest LinkedIn Tumblr

DSC_0073

ಮುಂಬಯಿ: ಬಿಲ್ಲವರ ಅಸೋಷಿಯೇಶನ್ ಮುಂಬಯಿ, ಬೋರಿವಲಿ ಸ್ಥಳೀಯ ಕಚೇರಿಯ ವತಿಯಿಂದ ನಾರಾಯಣ ಗುರುಗಳ 160ನೇ ಜಯಂತಿ ಆಚರಣೆಯನ್ನು ಕಚೇರಿಯ ಬೋರಿವಲಿ ಪಶ್ಚಿಮ ಗೋರಾಯಿಯಲ್ಲಿನ ಗುರು ಸನ್ನಿಧಿಯಲ್ಲಿ ಸೆ. 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

DSC_0064

DSC_0068

DSC_0070

DSC_0075

DSC_0076

ಗುರು ಜಯಂತಿ ಆಚರಣೆಯ ಪ್ರಯುಕ್ತ ಬೆಳಿಗ್ಗೆ ಸದಸ್ಯರಿಂದ ಭಜನೆ ನಡೆಯಿತು. ಆ ಬಳಿಕ ಗುರು ಪೂಜೆಯು ಕಚೇರಿಯ ಕಾರ್ಯದರ್ಶಿ ಮೋಹನ್ ಬಿ. ಅಮೀನ್ ಮತ್ತು ಶಾಂತಾ ಮೋಹನ್ ಅಮೀನ್ ಅವರ ಯಜಮಾನಿಕೆಯಲ್ಲಿ ಶೇಖರ್ ಶಾಂತಿಯವರ ಪೌರೋಹಿತ್ಯದಲ್ಲಿ ನಡೆಯಿತು. ಬೆಳಿಗ್ಗಿನಿಂದ ಮಧ್ಯಾಹ್ನ ತನಕ ನಡೆದ ಗುರುಪೂಜೆಯಲ್ಲಿ ಅಸೋಷಿಯೇಶನ್ ನ ಗೌರವ ಕಾರ್ಯದರ್ಶಿ ಡಾ. ಯು. ಧನಂಜಯ ಕುಮಾರ್, ಗೌ. ಕೋಶಾಧಿಕಾರಿ ಭಾಸ್ಕರ್ ಬಂಗೇರ, ನಿಕಟ ಪೂರ್ವ ಅಧ್ಯಕ್ಷ, ಬಿಜೆಪಿಯ ಧುರೀಣ ಎಲ್. ವಿ ಅಮೀ ನ್ ಅಸೋಷಿಯೇಶನ್ ನ ಉಪಾಧ್ಯಕ್ಷ ಭಾಸ್ಕರ ಸಾಲ್ಯಾನ್, ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಗಂಗಾಧರ ಜೆ. ಪೂಜಾರಿ, ಯುವ ಅಭ್ಯುದಯದ ಕಾರ್ಯಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಭಾರತ್ ಬ್ಯಾಂಕಿನ ಬಾಂದ್ರಾ ಶಾಖಾ ಪ್ರಬಂಧಕ ವಾಸುದೇವ ಸಾಲ್ಯಾನ್, ಸ್ಥಳೀಯ ಕಚೇರಿಯ ಗೌ. ಅಧ್ಯಕ್ಷ ಜಿ. ಎಂ. ಕೋಟ್ಯಾನ್, ಕಾರ್ಯಾಧ್ಯಕ್ಷ ದಾಮೋದರ ಸಿ. ಕುಂದರ್, ಉಪ ಕಾರ್ಯಧ್ಯಕ್ಷರುಗಳಾದ ಸುಂದರ್ ಪೂಜಾರಿ, ಕೃಷ್ಣರಾಜ್ ಸುವರ್ಣ, ಕಾರ್ಯದರ್ಶಿ ಮೋಹನ್ ಬಿ. ಅಮೀನ್, ಕೋಶಾಧಿಕಾರಿ ಶೇಖರ್ ಎಸ್. ಅಮೀನ್ ಹಾಗೂ ಸಮಿತಿಯ ಸದಸ್ಯರುಗಳಾದ ಶ್ರೀಧರ ಬಂಗೇರ, ವತ್ಸಲ ಪೂಜಾರಿ, ಸೀಮಂತೂರು ಚಂದ್ರಹಾಸ ಸುವರ್ಣ, ಆರ್. ಎಸ್. ಕೋಟ್ಯಾನ್, ಟಿ. ಎ. ಪೂಜಾರಿ, ಆಶೋಕ್ ಜಿ. ಸಾಲ್ಯಾನ್, ನಳನಿ ಎಸ್. ಪೂಜಾರಿ, ರತ್ನ ಯು. ಪೂಜಾರಿ, ದಯಾನಂದ ಪೂಜಾರಿ, ಸುರೇಶ್ ಡಿ. ಸಾಲ್ಯಾನ್ ಹಾಗೂ ಪರಿಸರದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಬಾಗವಹಿಸಿ ಗುರು ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Write A Comment