ಬೆಂಗಳೂರು: ಅಯೋಧ್ಯಾ ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲು ಚಾಲನೆ ನೀಡಲಾಗಿದ್ದು ಸಾಮಾನ್ಯರು ಹಾಗೂ ಸೆಲೆಬ್ರಿಟಿಗಳು ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ.
ಅಂತೆಯೇ ರಾಜರಾಜೇಶ್ವರಿ ನಿವಾಸಿಗಳಾಗಿರುವ ಜಗದೀಶ್ ಹಾಗೂ ನಟಿ ಅಮೂಲ್ಯ ದೇಣಿಗೆ ನೀಡಿರುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಗದೀಶ್ ದಂಪತಿಗಳು 1.50 ಲಕ್ಷ ರೂ ನೀಡಿದ್ದಾರೆ ಹಾಗೂ ತಂದೆ ರಾಮಚಂದ್ರ ಅವರ ಹೆಸರಿನಲ್ಲಿ 1 ಲಕ್ಷ ರೂ ದೇಣಿಗೆ ನೀಡಲಾಗಿದೆ. ಸದ್ಯ ಚೆಕ್ ಸಹಿ ಹಾಡುತ್ತಿರುವ ಫೋಟೋವನ್ನು ಅಮೂಲ್ಯ ಶೇರ್ ಮಾಡಿದ್ದಾರೆ. ‘ ಅಯೋಧ್ಯಾ ಶ್ರೀ ರಾಮನಿಗಾಗಿ ನಮ್ಮ ಕಿರುಕಾಣಿಕೆ. ನಾನು ಇದರಲ್ಲಿ ಭಾಗಿಯಾಗಿರುವುದಕ್ಕೆ ತುಂಬಾನೇ ಸಂತೋಷವಿದೆ. #NidhiSamrapan4RamMandir ಕ್ಯಾಂಪೇನ್. ಎಲ್ಲರೂ ಒಟ್ಟಾಗಿ ರಾಮಂದಿರ ಕಟ್ಟಲು ಸಹಾಯ ಮಾಡೋಣ. ಜೈ ಶ್ರೀರಾಮ್’ ಎಂದು ಜಗದೀಶ್ ಬರೆದುಕೊಂಡಿದ್ದಾರೆ.
Comments are closed.