ಕರ್ನಾಟಕ

ಮದುವೆ ತಯಾರಿಯಲ್ಲಿದ್ದ ಪ್ರೇಮಿಗಳಿಬ್ಬರ ಮೇಲೆ ಯುವತಿಯ ಮನೆಯವರಿಂದ ಮಚ್ಚಿನಿಂದ ಹಲ್ಲೆ

Pinterest LinkedIn Tumblr


ಹನೂರು(ಚಾಮರಾಜನಗರ): ಪ್ರೀತಿಸಿದ್ದ ಜೋಡಿಯೊಂದು ಮದುವೆಯಾಗಲು ಸಿದ್ಧತೆ ನಡೆಸಿದ್ದಾಗ ಅವರ ಮೇಲೆ ಯುವತಿಯ ತಂದೆ ಮತ್ತು ಅಣ್ಣ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಧನಲಕ್ಷ್ಮಿ(24) ಮತ್ತು ಸತ್ಯ(28) ಎಂಬುವವರೇ ಹಲ್ಲೇಗೀಡಾದ ಪ್ರೇಮಿಗಳು, ಈ ಇಬ್ಬರೂ ಒಂದೇ ಗ್ರಾಮದವರಾಗಿದ್ದು ಕಳೆದ 2 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಘಟನೆ ವಿವರ: ಚಾಮರಾಜ ನಗರದ ಪಿ.ಜಿ.ಪಾಳ್ಯ ನಿವಾಸಿ ಸತ್ಯ ಮತ್ತು ಅದೇ ಗ್ರಾಮದ ಧನಲಕ್ಷ್ಮೀ ಎಂಬ ಯುವತಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು ಸತ್ಯ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ ಇತ್ತ ಧನಲಕ್ಷ್ಮೀ ಕಳೆದ ಅಕ್ಟೋಬರ್ 30ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿದವಳು ಮನೆಗೆ ಬಾರದೆ ಬೆಂಗಳೂರಿಗೆ ತೆರಳಿ ಸತ್ಯನ ಜೊತೆ ಇರುತ್ತಾಳೆ.

ಬಳಿಕ ನವೆಂಬರ್ 10ರಂದು ಗ್ರಾಮಕ್ಕೆ ಹಿಂದಿರುಗಿದ ಇಬ್ಬರೂ ಸತ್ಯನ ಮನೆಯಲ್ಲಿಯೇ ವಾಸವಿದ್ದರು. ಈ ವೇಳೆ ಗ್ರಾಮಸ್ಥರೆಲ್ಲಾ ಸೇರಿ ತೀರ್ಮಾನ ಮಾಡಿ ಡಿ.7ರಂದು ಮದುವೆ ಮಾಡಿಸುವುದಾಗಿ ತೀರ್ಮಾನ ಕೈಗೊಳ್ಳುತ್ತಾರೆ.

ಇತ್ತ ಮದುವೆಯ ಸಂಭ್ರಮದಲ್ಲಿದ್ದ ಸತ್ಯ ಮತ್ತು ಧನಲಕ್ಷ್ಮೀ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಗ್ರಾಮದ ಮೆಡಿಕಲ್ ಸ್ಟೋರ್ ಬಳಿ ಮಾತ್ರೆ ಖರೀದಿಸಲು ಬಂದಿದ್ದಾರೆ. ಈ ವೇಳೆ ಧನಲಕ್ಷ್ಮಿಯ ತಂದೆ ಶಿವಸ್ವಾಮಿ ಮತ್ತು ಯುವತಿ ಅಣ್ಣ ಮಹೇಂದ್ರ ಎದುರಾಗುತ್ತಾರೆ.

ಈ ವೇಳೆ ಧನಲಕ್ಷ್ಮಿಯ ಜೊತೆ ತಂದೆ ಮತ್ತು ಸಹೋದರ ನೀನು ಸತ್ಯನ ಜೊತೆ ಮದುವೆಯಾಗುವುದು ಬೇಡ ನಿನಗೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ ಆದರೆ ಇದಕ್ಕೆ ಒಪ್ಪದ ಧನಲಕ್ಷ್ಮೀ ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ ಹೀಗೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಧನಲಕ್ಷಿಯ ತಂದೆ ಹಾಗೂ ಸಹೋದರ ಸೇರಿ ತನ್ನ ಕೈಯಲ್ಲಿದ್ದ ಮಚ್ಚಿನಿಂದ ಧನಲಕ್ಷ್ಮಿಯ ಮೇಲೆ ಹಲ್ಲೆ ನಡೆಸುತ್ತಾರೆ ಈ ವೇಳೆ ಹಲ್ಲೆಯನ್ನು ತಡೆಯಲೆತ್ನಿಸಿದ ಧನಲಕ್ಷ್ಮಿಯ ಕೈ ಬೆರಳಿಗೆ ಗಾಯಗಳಾಗಿದ್ದು. ಸತ್ಯನ ಮೇಲೂ ಹಲ್ಲೆ ನಡೆಸಿದ್ದಾರೆ.

ಸದ್ಯ ಇಬ್ಬರೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಾಗಿ ಹನೂರು ಪೊಲೀಸರಿಗೆ ದೂರು ನೀಡಿದ್ದು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Comments are closed.