ಕರ್ನಾಟಕ

ಮಂಡ್ಯದಲ್ಲಿ ಅಪರಿಚಿತ ಯುವತಿಯನ್ನು ಕತ್ತರಿಸಿ ಕೊಂದು ನಾಲೆಗೆ ಎಸೆದ ದುಷ್ಕರ್ಮಿಗಳು !

Pinterest LinkedIn Tumblr

ಮಂಡ್ಯ: ಅಪರಿಚಿತ ಯುವತಿಯೋರ್ವಳನ್ನು ಕೊಂದು ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ನಾಲೆಗೆ ಎಸೆದು ಹೋಗಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಸಮೀಪದ ಹೇಮಾವತಿ ನದಿಯ ಬಲ ದಂಡೆ ನಾಲೆಯಲ್ಲಿ ಕತ್ತರಿಸಿದ ಅಪರಿತ ಯುವತಿಯ ದೇಹ ಪತ್ತೆಯಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.

ಅಪರಿಚಿತ ಯುವತಿಯ ದೇಹದ ಅಂಗಾಗವನ್ನು ಕತ್ತರಿಸಿ ದುಷ್ಕರ್ಮಿಗಳು ಮೂಟೆಕಟ್ಟಿ ಎಸೆದು ಹೋಗಿದ್ದಾರೆ‌. ನಾಲೆಯಲ್ಲಿ ಈ ಮೂಟೆಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂಟೆಯಲ್ಲಿ ಯುವತಿಯ ದೇಹದ ಸ್ಥಿತಿ ‌ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಅಪರಿಚಿತ ಯುವತಿಯ ದೇಹವನ್ನು ದುಷ್ಕರ್ಮಿಗಳು ಭಯಾನಕವಾಗಿ ಕತ್ತರಿಸಿದ್ದಾರೆ. ಬೇರೆಲ್ಲೋ ಈ ಯುವತಿಯನ್ನು ಕೊಲೆಗೈದು ಕೈ,ಕಾಲು, ರುಂಡ, ಮುಂಡ, ಮುಂಗೈ, ಎಲ್ಲವನ್ನು ಬೇರ್ಪಡಿಸಿ ಚೀಲದಲ್ಲಿ ತುಂಬಿ ಇಲ್ಲಿಗೆ ತಂದು ನಾಲೆಗೆ ಎಸೆದು ಹೋಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಎರಡು ಮೂರು ದಿನಗಳ ಹಿಂದೆ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಬರ್ಬರವಾಗಿ ಕೊಲೆಯಾಗಿರೋ ಈ ಅಪರಿಚಿತ ಯುವತಿಯ ವಯಸ್ಸು ಸುಮಾರು 22 ರಿಂದ 25 ವರ್ಷ ವಯಸ್ಸಿನದ್ದಾಗಿದ್ದು, ಪೊಲೀಸರುಕೊಲೆಯಾದ ಯುವತಿ ಪತ್ತೆಗಾಗಿ ಮಾಹಿತಿ ಕಲೆ ಹಾಕ್ತಿದ್ದಾರೆ. ಸದ್ಯ ಮಾಹಿತಿ ನೀಡಿದ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಮೃತ ಯುವತಿಯ ಯಾರು? ಎಲ್ಲಿಯವಳು?ಎನ್ನುವುದರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.

ಇನ್ನು ಈ ಸಂಬಂಧ ಕೆ.ಆರ್.ಪೇಟೆ ಪೊಲೀಸರು ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಹಿರಿ ಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ‌. ಅಲ್ಲದೇ ಈ ಭೀಕರ ಹತ್ಯೆಯ ಪ್ರಕರಣ ಭೇಧಿಸಲು ತಂಡವನ್ನು ರಚಿಸಿದ್ದಾರೆ. ಈಗಾಗಲೇ ಕಾರ್ಯೋನ್ಮುಖವಾಗಿರುವ ಪೊಲೀಸರ ತಂಡ ಮಾಹಿತಿ ಸಂಗ್ರಹಿಸಿದ್ದು, ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments are closed.