ಕರ್ನಾಟಕ

ವರದಕ್ಷಿಣೆ ಕೇಸು ಹಾಕೋದಾಗಿ ಹೇಳಿದ ಅತ್ತಿಗೆಯ ಚುಚ್ಚಿ ಕೊಂದ..!

Pinterest LinkedIn Tumblr

ಬೆಂಗಳೂರು: ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನು 20 ಬಾರಿ ಚಾಕುವಿನಿಂದ ಇರಿದು ಕೊಂದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಬೆಸ್ಕಾಂ ಉದ್ಯೋಗಿ ಕೆ.ಆರ್.ಪುರಂ ನಿವಾಸಿ ಲಾವಣ್ಯ (37) ಕೊಲೆಯಾದವರು.

(ಸಾಂದರ್ಭಿಕ ಚಿತ್ರ)

ಆರೋಪಿ ವಿಜಯ್ ಟೈಲರ್ ಆಗಿದ್ದು ಆತ ತನ್ನ ಪತ್ನಿ ಲಕ್ಷ್ಮಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಈ ಸಂಬಂಧ ಲಕ್ಷ್ಮಿ ಅಕ್ಕನಾದ ಲಾವಣ್ಯ ತಾನು ವಿಜಯ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ಸಲ್ಲಿಸುವುದಾಗಿ ಹೇಳಿಕೊಂಡಿದ್ದರು.

ಭಾನುವಾರ ಈ ಕುರಿತಂತೆ ಇಬ್ಬರ ನಡುವೆ ಜಗಳವಾಗಿದ್ದು ವಿಜಯ್ ಕುಮಾರ್ ಲಾವಣ್ಯಗೆ ಚಾಕುವಿನಿಂದ ಇರಿದಿದ್ದಾನೆ ಪರಿಣಾಮ ರಕ್ತಸ್ರಾವವಾಗಿ ಲಾವಣ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ವಿಜಯ್ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಸ್ಥಳೀಯರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿ ವಿಜಯ್ ಪೊಲೀಸ್ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Comments are closed.