ಕರ್ನಾಟಕ

ಆರ್​ ನಗರ, ಶಿರಾ ಉಪಚುನಾವಣಾ ಕದನ; ಬಿಜೆಪಿಯ ಮುನಿರತ್ನ, ರಾಜೇಶ್​ ಗೌಡ ಮುನ್ನಡೆ

Pinterest LinkedIn Tumblr

ಕರ್ನಾಟಕದ ಶಿರಾ ಮತ್ತು ಆರ್​ ಆರ್​ ನಗರ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಆರ್​ ಆರ್​ ನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕುಸುಮಾ ಹೆಚ್‌ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ. ಇಲ್ಲಿ ಮುನಿರತ್ನ ಮುನ್ನಡೆಯಲ್ಲಿದ್ದಾರೆ.

ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ರಾಜೇಶ್​ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಕಣದಲ್ಲಿದ್ದಾರೆ. ಇಲ್ಲಿ ಡಾ. ರಾಜೇಶ್​ ಗೌಡ ಮುನ್ನಡೆಯಲ್ಲಿದ್ದಾರೆ.

ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿದ್ದ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ನ. 3ರಂದು ಉಪಚುನಾವಣೆ ನಡೆದಿತ್ತು.

8 ನೇ ಸುತ್ತಿನ ಮತ ಎಣಿಕೆ….

ಮುನಿರತ್ನ: 50,387 ಮತಗಳು
ಕುಸುಮಾ: 25,244
ಕೃಷ್ಣಮೂರ್ತಿ:1711

 

ಡಾ. ರಾಜೇಶ್​ ಗೌಡ:16,909
ಟಿ.ಬಿ. ಜಯಚಂದ್ರ:15,515
ಅಮ್ಮಾಜಮ್ಮ:10,348

Comments are closed.